Advertisement

Udupi; ಬೆಳ್ಳಿ ಆಭರಣ ಮಳಿಗೆಗೆ ಲಕ್ಷಾಂತರ ರೂ. ವಂಚನೆ

01:00 AM Mar 13, 2024 | Team Udayavani |

ಉಡುಪಿ: ಒಳಕಾಡಿ ನಲ್ಲಿರುವ ಬೆಳ್ಳಿಯ ಆಭರಣಗಳ ಅಂಗಡಿಯ ಮ್ಯಾನೇಜರ್‌ ವಿಶಾಲ್‌ ಎಂಬಾತನು ತನ್ನ ಸಂಸ್ಥೆಗೆ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ.

Advertisement

ಸೆ.25ರಂದು ಈತನ ಬಗ್ಗೆ ಅನುಮಾನಗೊಂಡು ಸಂಸ್ಥೆಯ ಮಾಲಕರು ಲೆಕ್ಕಪತ್ರಗಳನ್ನು ಪರಿಶೀಲಿ ಸಿದಾಗ ಆರೋಪಿಯು 17 ಲ.ರೂ.ಮೌಲ್ಯದ 25 ಕೆಜಿ 980 ಗ್ರಾಂ ತೂಕದ ಬೆಳ್ಳಿಯ ಬಗ್ಗೆ ಮೋಸ ಮಾಡಿ ನಷ್ಟ ಉಂಟು ಮಾಡಿದ್ದ. ಈ ಬಗ್ಗೆ ಆತನನ್ನು ದೂರವಾಣಿ ಮೂಲಕ ವಿಚಾರಿಸಿದಾಗ ತಪ್ಪನ್ನು ಒಪ್ಪಿಕೊಂಡು 10 ಲ.ರೂ.ಗಳನ್ನು ಮಾಲಕರಿಗೆ ನೀಡಿದ್ದ. ಬಳಿಕ ಉಳಿದ ಹಣವನ್ನು ಕೇಳಿದಾಗ ತಾನು ಯಾವುದೇ ಹಣ ಕೊಡಲಿಕ್ಕಿಲ್ಲ ಎಂದಿದ್ದ. ಅನಂತರ ತಾನು ನೀಡಿದ್ದ 10 ಲ.ರೂ.ಗಳನ್ನು ಹಿಂದಿರುಗಿಸಬೇಕೆಂದು ಹೇಳಿದ್ದಲ್ಲದೆ, ಜೀವ ಬೆದರಿಕೆಯನ್ನೂ ಒಡ್ಡಿರುವುದಾಗಿ ಸಂಸ್ಥೆಯ ಲತಿಕಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next