Advertisement

Udupi LVT temple: ನಗರ ಭಜನೆಗೆ ಚಾಲನೆ

07:06 PM Aug 07, 2023 | Team Udayavani |

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿವಿಧ ಭಜನ ಮಂಡಳಿಗಳಿಂದ ಜು. 18ರಿಂದ ಆ. 17ರ ವರೆಗೆ ನಡೆಯುತ್ತಿರುವ ಅಹೋರಾತ್ರಿ ಭಜನೆಯ ಪ್ರಯುಕ್ತ ಪ್ರತಿ ರವಿವಾರ ನಗರ ಭಜನೆ ಹಮ್ಮಿಕೊಳ್ಳಲಾಗಿದೆ. 3ನೇ ರವಿವಾರದ ಭಜನೆಗೆ ಗುಂಡಿಬೈಲಿನ ಸುರೇಶ ರಾವ್‌ ದಂಪತಿ ತಮ್ಮ ಮನೆಯಲ್ಲಿ ಚಾಲನೆ ನೀಡಿದರು.

Advertisement

ಅಲ್ಲಿಂದ ಹೊರಟ ಭಜನ ತಂಡವು ಹರಿನಾಮ ಸಂಕೀರ್ತನೆಯೊಂದಿಗೆ ಗುಂಡಿಬೈಲು, ಕಲ್ಸಂಕ, ಬಡಗುಪೇಟೆ ಮಾರ್ಗವಾಗಿ ರಥಬೀದಿಯ ಕನಕ ಕಿಂಡಿಯ ಮುಂಭಾಗ, ಅನಂತೇಶ್ವರ ದೇವಸ್ಥಾನ, ಶ್ರೀ ಕೃಷ್ಣಮಠದ ಮುಂಭಾಗದಿಂದ ಸಾಗಿ ಕನಕದಾಸ ರಸ್ತೆ, ಮಾರುತಿ ವೀಥಿಕಾ ಮಾರ್ಗವಾಗಿ ತೆಂಕಪೇಟೆ, ದೇವಸ್ಥಾನದ ಹಿಂಬದಿಯ ಮಾರ್ಗವಾಗಿ ದೇವಸ್ಥಾನ ತಲುಪಿತು.

ದೇವಸ್ಥಾನದ ಟ್ರಸ್ಟಿಗಳಾದ ಅಲೆವೂರು ಗಣೇಶ ಕಿಣಿ, ಮಟ್ಟಾರು ವಸಂತ ಕಿಣಿ, ಪ್ರಕಾಶ ಶೆಣೈ, ವಿಶಾಲ್‌ ಶೆಣೈ, ಜಿಎಸ್‌ಬಿ ಯುವಕ ಮಂಡಳಿ ಅಧ್ಯಕ್ಷ ನಿತೀಶ್‌ ಶೆಣೈ, ಮಹಿಳಾ ಮಂಡಳಿ ಅಧ್ಯಕ್ಷೆ ಎಚ್‌. ಸುಧಾ ಶೆಣೈ, ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next