Advertisement

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

03:04 AM Oct 16, 2024 | Team Udayavani |

ಉಡುಪಿ: ಅಧಿಕ ಲಾಭಾಂಶದ ಆಮಿಷವೊಡ್ಡಿ ವಿದ್ಯಾರ್ಥಿಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

Advertisement

ಮಣಿಪಾಲ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಆರ್ಕಿಟೆಕ್ಟ್ ಹಾಗೂ ಪ್ಲಾನಿಂಗ್‌ ವಿಭಾಗದಲ್ಲಿ ಕಲಿಯುತ್ತಿರುವ ಹರೀಶ್‌ ಹಣ ಕಳೆದುಕೊಂಡವರು. ಅ. 12ರಂದು ಅವರ ಮೊಬೈಲ್‌ಗೆ ಆ್ಯಪ್‌ ಲಿಂಕ್‌ ಹಾಗೂ ಸಂದೇಶ ಕಳುಹಿಸಿ ಹಣವನ್ನು ದುಪ್ಪಟ್ಟು ಮಾಡುವ ಆಸೆ ತೋರಿಸಿದ್ದಾರೆ.

ಅಪರಿಚಿತರು ಸುಮಾರು 3,85,599 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next