Advertisement

Udupi; ಲ್ಯಾಪ್‌ಟಾಪ್‌ ಕಳವು ಪ್ರಕರಣ: ಆರೋಪಿ ಖುಲಾಸೆ

11:19 PM Jul 24, 2024 | Team Udayavani |

ಉಡುಪಿ: ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯದಲ್ಲಿ ನಡೆದ ಲ್ಯಾಪ್‌ಟಾಪ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.

Advertisement

2019ರ ಅ. 29ರಂದು ರಾತ್ರಿ ವೇಳೆ ಕಾಲೇಜಿನ ಕಿಟಕಿ ಬಾಗಿಲು ಮುರಿದು ಒಳಪ್ರವೇಶಿಸಿ ಕಾಲೇಜಿನ ಲ್ಯಾಪ್‌ಟಾಪ್‌ಗಳು ಮತ್ತು ಚಾರ್ಜರ್‌ಗಳನ್ನು ಕಳವು ಮಾಡಿರುವ ಬಗ್ಗೆ ಪ್ರಾಂಶುಪಾಲೆ ನಿರ್ಮಲಾ ಕುಮಾರಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಸಂತೋಷ್‌ ಶ್ರೀ ವತ್ಸವ್‌ ಅವರು ವಿಚಾರಣೆ ನಡೆಸಿ ಆರೋಪಿಯನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿದ್ದಾರೆ.

ಆರೋಪಿಯ ಪರ ಪ್ರದೀಪ್‌ ಪಿ.ಜೆ., ಬೈಲೂರು ರವೀಂದ್ರ ದೇವಾಡಿಗ ಮತ್ತು ನಾಗೇಶ್ವರ ಶೆಣೈ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next