Advertisement

Udupi: ಅಧಿಕ ಲಾಭಾಂಶದ ಆಸೆಗೆ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

08:06 PM Sep 17, 2024 | Team Udayavani |

ಉಡುಪಿ: ಅಧಿಕ ಲಾಭಾಂಶದ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

Advertisement

ಕುಂಜಿಬೆಟ್ಟುವಿನ ಅಶ್ವಿ‌ನ್‌ ಕಾಮತ್‌ ಬಿ. ವಂಚನೆಗೊಳಗಾದವರು.

ಯಾರೋ ಅಪರಿಚಿತ ವ್ಯಕ್ತಿಗಳು ಅವರನ್ನು GFSL-Security official Stocks-F10 ವಾಟ್ಸಾಪ್‌ ಗುಂಪಿಗೆ ಸೇರ್ಪಡೆ ಮಾಡಿ ಸ್ಟಾಕ್‌ ಮಾರ್ಕೆಟ್‌ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅನಂತರ ಅವರು ಹೇಳಿದ ಷೇರಿನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿದ್ದು, ಅದರಂತೆ ಮೇ 13ರಿಂದ ಜೂ. 3ರ ವರೆಗೆ ಆರೋಪಿಗಳು ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 17,89,001 ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಆದರೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶನ್ನಾಗಲಿ ನೀಡದೆ ವಂಚನೆ ಮಾಡಿದ್ದಾಗಿ ಉಡುಪಿ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next