Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿದೆ ಉಡುಪಿ ಕುತ್ಪಾಡಿಯ ಕೃಷಿ ಫಸಲಿನ ಕಂಪು

10:32 AM Aug 26, 2020 | keerthan |

ಕಟಪಾಡಿ: ಈ ಬಾರಿಯೂ ತೆನೆ ಹಬ್ಬಕ್ಕೆ ಉದ್ಯಾವರ ಕುತ್ಪಾಡಿಯ ಜೂಲಿಯನ್ ದಾಂತಿ ಅವರ ಅರ್ಧ ಎಕರೆ ಗದ್ದೆಯಲ್ಲಿ ತೆನೆ ಭರಿತ ಪೈರಿನ ಫಸಲು ಸಿದ್ಧಗೊಂಡಿದೆ.

Advertisement

ಜೂಲಿಯನ್ ದಾಂತಿ ಅವರು ಉದ್ಯಾವರ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವರ ಅವಭೃತೋತ್ಸವ ದಿನದ ಸಾಂಸ್ಕಂತಿಕ ವೈಭವದ ಕಾರ್ಯಕ್ರಮಗಳಿಗೂ ತಮ್ಮ ಕೃಷಿ ಗದ್ದೆಯ ಪ್ರದೇಶದಲ್ಲಿ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಚೌತಿ ಹಬ್ಬದ ಸಂದರ್ಭ ಕಟ್ಟುವ ತೆನೆ ಹಬ್ಬಕ್ಕೂ ತನ್ನ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಧರ್ಮಾತೀತವಾಗಿ ಉಚಿತವಾಗಿ ಒದಗಿಸಲಿದ್ದಾರೆ.

ಈ ತೆನೆ ಹಬ್ಬಕ್ಕಾಗಿಯೇ ತನ್ನ ಅರ್ಧ ಎಕರೆ ಗದ್ದೆಯಲ್ಲಿ ಎಪ್ರಿಲ್-ಮೇ ತಿಂಗಳಲ್ಲಿಯೇ ನಾಟಿ ಕೆಲಸವನ್ನು ಪೂರೈಸುತ್ತಾರೆ. ಸುಡು ಮಣ್ಣು, ಹಟ್ಟಿಗೊಬ್ಬರ ಬಳಸಿ ಸಾವಯವ ಕೃಷಿಯಲ್ಲಿ ಹೆಚ್ಚು ನೆಚ್ಚಿಕೊಂಡಿದ್ದು, ಸಮರ್ಪಕ ಮಳೆಯು ಸುರಿಯುವ ಮುನ್ನವೇ ಪಂಪ್ ಮೂಲಕ ಗದ್ದೆಗೆ ನೀರು ಹಾಯಿಸಿ ಕೃಷಿ ಚಟುವಟಿಕೆ ನಿರತರಾಗುವ ಜೂಲಿಯನ್ ದಾಂತಿ ಅವರ ಸೇವಾ ನಿಷ್ಠೆಯಲ್ಲಿ ಬೆಳೆದ ಈ ಗದ್ದೆಯ ತೆನೆ ಭರಿತ ಫಸಲನ್ನು ತೆನೆ ಹಬ್ಬ ಹಾಗೂ ಬಾನಾಡಿಗಳ ಆಹಾರಕ್ಕಾಗಿ ಮೀಸಲಿಡುವುದು ಸರ್ವತ್ರ ಮಾದರಿಯಾಗಿದೆ

ಕೃಷಿ ಮಣ್ಣಿನ ಕಂಪಿನ ಫಸಲನ್ನು ಕಳೆದ 25 ವರ್ಷಗಳಿಂದಲೂ ರಾಷ್ಟ್ರ, ಅಂತಾರಾಷ್ಟ್ರದಲ್ಲಿನ ಇಗರ್ಜಿಗಳಿಗೆ ಕನ್ಯಾ ಮರಿಯಮ್ಮನ ಜನ್ಮದಿನದಂದು ಆಚರಿಸುವ ತೆನೆ (ಕದಿರು)ಕಟ್ಟಲು ಹಾಗೂ ದೇಗುಲಗಳು, ಸಂಘ, ಸಂಸ್ಥೆಗಳು, ಕೌಟುಂಬಿಕವಾಗಿಯೂ ಫಸಲು ಭರಿತ ತೆನೆಯನ್ನು ಒದಗಿಸುತ್ತಾ ಬಂದಿರುವ ಉದ್ಯಾವರ ಕುತ್ಪಾಡಿಯ ಜೂಲಿಯನ್ ದಾಂತಿ ಸಮಗ್ರ ಕೃಷಿಕರಾಗಿ ಗುರುತಿಸಿಕೊಂಡಿರುತ್ತಾರೆ

Advertisement

ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next