Advertisement
ಕಳೆದ ಬಾರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉಡುಪಿಗೆ ಆಗಮಿಸಿದ್ದಾಗ ನೂತನ ಪ್ರವಾಸಿ ಬಂಗಲೆಯಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಈ ಬಾರಿ ರಾಮನಾಥ ಕೋವಿಂದ್ ಅವರು ಕೂಡ ಇಲ್ಲಿಯೇ ವಿಶ್ರಮಿಸುವ ನಿರೀಕ್ಷೆ ಇರುವುದರಿಂದ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಹೊಸ ಐಬಿಯಲ್ಲಿ ಮೇಲಂತಸ್ತು ಮತ್ತು ಕೆಳ ಅಂತಸ್ತಿನಲ್ಲಿ ತಲಾ ಒಂದು ವಿವಿಐಪಿ ಸೂಟ್ಗಳಿವೆ. ಕೆಳಗಿನ ವಿವಿಐಪಿ ಸೂಟ್ನ್ನು ರಾಷ್ಟ್ರಪತಿಯವರಿಗೆ ಮೀಸಲಿ ಡಲಾಗುತ್ತದೆ. ಪ್ರಣವ್ ಮುಖರ್ಜಿ ಅವರ ಆಗಮನದ ವೇಳೆ ವಿವಿಐಪಿ ಸೂಟ್ಗೆ ಬೇಕಾದ ಸಲಕರಣೆಗಳನ್ನು ಜೋಡಿಸಿ ಸಿದ್ಧಪಡಿಸಲಾಗಿತ್ತು. ಹೊಸ ಐಬಿಯ 20 ಹಾಗೂ ಹಳೆಯ ಐಬಿಯ 5 ಕೊಠಡಿಗಳು ಸೇರಿದಂತೆ ಎಲ್ಲ ಕೊಠಡಿಗಳನ್ನು ಸುವ್ಯವಸ್ಥಿತವಾಗಿಸುವ ಕೆಲಸ ನಡೆಯುತ್ತಿದೆ. ಅಗತ್ಯ ಇರುವಲ್ಲಿ ಪೈಂಟಿಂಗ್ ಟಚ್ಅಪ್ ಕೊಡಲಾಗುತ್ತಿದೆ. ಹಳೆಯ ಐಬಿಗೆ ಸಂಪೂರ್ಣ ಪೈಂಟಿಂಗ್ ನಡೆಯುತ್ತಿದೆ. ಹೊಟೇಲ್ನಿಂದ ಭೋಜನ
ಕಳೆದ ಬಾರಿ ಪ್ರಣವ್ ಮುಖರ್ಜಿ ಅವರಿಗೆ ಉಡುಪಿಯ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ಭೋಜನ ಸಿದ್ಧಪಡಿಸಲಾಗಿತ್ತು. ಈ ಬಾರಿಯೂ ಅಲ್ಲಿಯೇ ತಯಾರಾಗುವ ಸಾಧ್ಯತೆಗಳಿವೆ. ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಐಬಿಯಲ್ಲಿ ಮೂರು ದಿನಗಳ ಕಾಲ ಇತರರಿಗೆ ಕೊಠಡಿಗಳ ಬುಕ್ಕಿಂಗ್ ಇರುವುದಿಲ್ಲ. ಈ ಹಿಂದೆ ರಾಜೀವ್ ಗಾಂಧಿ, ಅನಂತರ ರಾಷ್ಟ್ರಪತಿ ಶಂಕರ್ದಯಾಳ್ ಶರ್ಮಾ ಅವರು ಕೂಡ ಉಡುಪಿಯ ಐಬಿಯಲ್ಲಿ (ಹಳೆ) ತಂಗಿದ್ದರು.