Advertisement

ಉಡುಪಿ:ಹಿಜಾಬ್ ವಿವಾದ; ಪ್ರಾಂಶುಪಾಲರ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ

06:35 PM Jan 21, 2022 | Team Udayavani |

ಉಡುಪಿ: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ಕಾರ್ಫ್ ವಿವಾದ ಇತ್ಯರ್ಥಗೊಳಿಸದೇ 8 ಮಂದಿ ವಿದ್ಯಾರ್ಥಿನಿಯರ ಶೈಕ್ಷಣಿಕ ಜೀವನದಲ್ಲಿ ಚೆಲ್ಲಾಟವಾಡುವ ಪ್ರಾಂಶುಪಾಲರ ವಿರುದ್ದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಎನ್‌ಎಸ್‌ಯುಐ ಎಚ್ಚರಿಕೆ ನೀಡಿದೆ.

Advertisement

ವಿವಾದಕ್ಕೆ ಸಂಬಂಧಿಸಿ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಲು ಶುಕ್ರವಾರ ಕಾಲೇಜಿಗೆ ಎನ್‌ಎಸ್‌ಯುಐ ನಿಯೋಗ ಭೇಟಿ ನೀಡಿದ್ದು, ಕಾಲೇಜಿನ ಆಫೀಸ್‌ಗೆ ಬೀಗ ಹಾಕಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಶತ್ ಬಿ. ಶಿವಣ್ಣ ಮಾತನಾಡಿ, ಕಾಲೇಜಿನ ಪ್ರಾಾಂಶುಪಾಲರೇ ಭೇಟಿಗೆ ಬರುವಂತೆ ನಮಗೆ ತಿಳಿಸಿದ್ದು, ಈಗ ಗೇಟ್‌ಗೆ ಬೀಗ ಹಾಕಿ ಕಾಲೇಜಿಗೆ ರಜೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಎನ್‌ಎಸ್‌ಯುಐನಿಂದ ಈ ಬಗ್ಗೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಕೋವಿಡ್‌ನಿಂದ ಕಾಲೇಜಿಗೆ ರಜೆ

Advertisement

ಕಾಲೇಜಿನ 6 ವಿದ್ಯಾರ್ಥಿನಿಯರು, ಒರ್ವ ಸಿಬಂದಿ ಸಹಿತ ಒಟ್ಟು ಏಳು ಮಂದಿಗೆ ಕೋವಿಡ್ ಸೋಂಕು ಬಂದಿರುವ ಹಿನ್ನೆೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಕಾಲೇಜಿಗೆ ರಜೆ ನೀಡಲಾಗಿದೆ. ನಮಗೆ ಈ ನಿಯೋಗ ಬರುವ ಮಾಹಿತಿ ಇರಲಿಲ್ಲ. ಹಿಜಾಬ್ ವಿವಾದಕ್ಕೆೆ ಸಂಬಂಧಿಸಿ ಪೋಷಕರ ಜತೆ ಮಾತುಕತೆ ನಡೆಸಲಾಗಿದೆ. ಪೋಷಕರು ಇದಕ್ಕೆ ಸಮ್ಮತಿ ಸೂಚಿಸಿದ್ದರು. ಅನಂತರ ಒಟ್ಟು 12 ವಿದ್ಯಾರ್ಥಿಗಳಿಂದ 8ಕ್ಕೆೆ ಸಂಖ್ಯೆೆ ಇಳಿದಿದೆ. ಈಗ 6 ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next