Advertisement

Udupi ಗುಂಡಿಬೈಲು: ಬುಲೆಟ್‌ ಢಿಕ್ಕಿ; ಪಾದಚಾರಿ ಸಾವು

11:14 PM Nov 11, 2023 | Team Udayavani |

ಉಡುಪಿ: ಗುಂಡಿಬೈಲಿನಲ್ಲಿ ಶುಕ್ರವಾರ ಸಂಜೆ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಬುಲೆಟ್‌ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಪಾಡಿಗಾರ ನಿವಾಸಿ ಗೋವಿಂದ (50) ಮೃತಪಟ್ಟವರು.

Advertisement

ಗುಂಡಿಬೈಲು ಕಡೆಗೆ ದುಡುಕು, ನಿರ್ಲಕ್ಷ್ಯತನದಿಂದ ಬುಲೆಟ್‌ನಲ್ಲಿ ಹೋಗುತ್ತಿದ್ದ ದರ್ಶಿತ್‌ ರಸ್ತೆ ದಾಟುತ್ತಿದ್ದ ಗೋವಿಂದ ಅವರಿಗೆ ಹೊಡೆದಿದ್ದು, ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು.

ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದ ವೇಳೆ ಅವರು ಮೃತಪಟ್ಟಿದ್ದರು. ಬುಲೆಟ್‌ ಸವಾರ ದರ್ಶಿತ್‌ಗೆ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next