Advertisement

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

02:55 PM Oct 22, 2020 | sudhir |

ಉಡುಪಿ: ಚಿನ್ನಕ್ಕೆ ಪಾಲಿಶ್ ಮಾಡುವ ಅಂಗಡಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯ ಡ್ರಾವರ್ ನಲ್ಲಿದ್ದ ಸುಮಾರು ₹ 80 ಸಾವಿರ ಮೌಲ್ಯದ 15 ಗ್ರಾಂ. ತೂಕದ ಚಿನ್ನವನ್ನು ದೋಚಿದ ಘಟನೆ ಉಡುಪಿಯಲ್ಲಿ ಬುಧವಾರ ಮಧ್ಯರಾತ್ರಿ ಸುಮಾರಿಗೆ ನಡೆದಿದೆ.

Advertisement

ಉಡುಪಿಯ ತೆಂಕಪೇಟೆಯ ರಾಮಭವನ ಹೋಟೆಲ್ ಎದುರಿನ ಮನೀಶ್ ಚಿನ್ನದ ಪಾಲಿಶ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ಆಭರಣಗಳಿಗೆ ಪಾಲಿಶ್ ಮಾಡಲು ತಂದಿಟ್ಟಿದ್ದ ಚಿನ್ನವನ್ನು ಕಳ್ಳರು ಕದ್ದೊಯ್ದಿದ್ದಾರೆ. ಶಾಪ್ ನ ಮಾಲೀಕ ಸದಾನಂದ ಅವರು ಕೆಲಸ ಮುಗಿದ ಬಳಿಕ ಉಳಿದ ಚಿನ್ನವನ್ನು ಮನೆಗೆ ಕೊಂಡೊಯ್ಯುತ್ತಿದ್ದರು. ಆದರೆ ನಿನ್ನೆ ಬೇರೆ ಕೆಲಸದ ನಿಮಿತ್ತ ಅಂಗಡಿಯಲ್ಲಿಯೇ ಚಿನ್ನವನ್ನು ಇಟ್ಟಿದ್ದರು ಎನ್ನಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next