Advertisement

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸ್ಸರ್

02:40 PM Aug 04, 2021 | Team Udayavani |

ಉಡುಪಿ : ಅಪರಿಚರಿತರು ಕಳುಹಿಸಿದ ಬ್ಯಾಂಕ್‌ ಸಂಬಂಧಿಸಿದ ಸಂದೇಶಕ್ಕೆ ಸ್ಪಂದಿ️ಸಿದ ಅಸೋಸಿಯೇಟ್‌ ಪ್ರೊಫೆಸರ್‌ 67,000 ರೂ. ಕಳೆದುಕೊಂಡ ಪ್ರಕರಣ ಉಡುಪಿ ಠಾಣೆಯಲ್ಲಿ ದಾಖಲಾಗಿದೆ.

Advertisement

ಕೆಎಂಸಿ ಫಾರ್ಮಕಾಲಜಿ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಎ. ಮೋಹನ್ ಬಾಬು ವಿ.(43) ಅವರಿಗೆ ಆ.3ರಂದು ಎಸ್‌ಬಿಐ ಮಣಿಪಾಲ ಶಾಖೆಯ ಕೆವೈಸಿ ಆಪ್‌ ಡೇಟ್‌ ಮಾಡುವಂತೆ ಅಪರಿಚಿತರು ಲಿಂಕ್‌ ಕಳುಹಿಸಿದ್ದಾರೆ.

ಈ ವೇಳೆ ಮೋಹನ್ ಬಾಬು ಅವರು ಲಿಂಕ್‌ ಕ್ಲಿಕ್‌ ಮಾಡಿದಾಗ ಕ್ರಮವಾಗಿ 20,000 ರೂ., 33,500 ರೂ., 33,500 ರೂ. ಮೊತ್ತವನ್ನು ಡ್ರಾ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಉಡುಪಿ : ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 19 ಲ.ರೂ ವಂಚನೆ

Advertisement

Udayavani is now on Telegram. Click here to join our channel and stay updated with the latest news.

Next