Advertisement

Udupi; ಜೀವ ಬೆದರಿಕೆಯಿಂದ ಬೇಸತ್ತು ಆತ್ಮಹತ್ಯೆ

12:55 AM Mar 21, 2024 | Team Udayavani |

ಉಡುಪಿ: ಜೀವ ಬೆದರಿಕೆಯಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಕೊಳಂಬೆಯ ಸುರೇಶ್‌ ಅವರು ಪ್ರಶಾಂತ್‌ ಅವರಿಗೆ ಅಂಗಡಿಯನ್ನು ಬಾಡಿಗೆಗೆ ನೀಡಿದ್ದರು. ಆದರೆ ಅವರು ಅಂಗಡಿಯ ಬಾಡಿಗೆ ಹಣವನ್ನು ಪಾವತಿಸಿರಲಿಲ್ಲ. ಡಿ. 4ರಂದು ರಾತ್ರಿ ಪ್ರಶಾಂತ್‌ ಅವರು ಸುರೇಶ್‌ ಅವರಿಗೆ ಕರೆಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದೇ ಕಾರಣದಿಂದ ಆಘಾತಕ್ಕೊಳಗಾಗಿ ಸುರೇಶ್‌ ಅವರು ಡಿ. 8ರಂದು ಸಾವನ್ನಪ್ಪಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಸ್ಥಿತಿ ಚಿಂತಾಜನಕ: ವಾರಸುದಾರರಿಗೆ ಸೂಚನೆ
ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ 60 ವರ್ಷದ ಅಪರಿಚಿತ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ. ವಾರಸುದಾರರು ಇದ್ದಲ್ಲಿ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ (0820-2520555) ವನ್ನು ಸಂಪರ್ಕಿಸಬಹುದು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next