Advertisement

Udupi: ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ; ಪ್ರಕರಣ ದಾಖಲು

09:23 PM Aug 23, 2024 | Team Udayavani |

ಉಡುಪಿ: ಯಾವುದೋ ಕಾರಣಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ಶುಕ್ರವಾರ(ಆ.23) ನಡೆದಿದೆ.

Advertisement

ಅಜ್ಜರಕಾಡು ವಾರ್ಡಿನ ಫ್ಲ್ಯಾಟೊಂದರ ನಿವಾಸಿ, ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ತುಷಾರ್‌ ವೇಗಾಸ್‌ (17) ಆತ್ಮಹತ್ಯೆ ಮಾಡಿಕೊಂಡವರು.

ಶುಕ್ರವಾರವೂ ಕಾಲೇಜಿಗೆ ತೆರಳಿದ್ದ ಆತ ಮಧ್ಯಾಹ್ನ 3.30ರ ಸುಮಾರಿಗೆ ಮನೆಗೆ ಆಗಮಿಸಿ ಮಲಗುತ್ತೇನೆ ಎಂದು ತಾಯಿಯಲ್ಲಿ ತಿಳಿಸಿ ರೂಮಿಗೆ ತೆರಳಿದ್ದ. ಸುಮಾರು 4 ಗಂಟೆ ಹೊತ್ತಿಗೆ ಏನೋ ಅನುಮಾನ ಬಂದು ಬಾಗಿಲು ಬಡಿದಾಗ ಒಳಗಿನಿಂದ ಚಿಲಕ ಹಾಕಲಾಗಿತ್ತು. ಕೂಡಲೇ ನೆರೆಕರೆಯವರ ಸಹಾಯದಿಂದ ಬಾಗಿಲನ್ನು ಒಡೆದು ನೋಡಿದಾಗ, ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next