Advertisement

Udupi:ನಂಬಿಕೆ ದ್ರೋಹ, ವಂಚನೆ: ದೂರು ದಾಖಲು

10:31 PM Aug 06, 2023 | Team Udayavani |

ಉಡುಪಿ: ಕ್ರಯ ಸಾಧನ ಆಗುವ ಸಮಯದಲ್ಲಿ ರಸ್ತೆಗೆ ನಿಗದಿಪಡಿಸಿದ ಜಾಗವನ್ನು ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿದ ಬಗ್ಗೆ ಸಂತೆಕಟ್ಟೆಯ ನಿವಾಸಿ ಫ್ರಾನ್ಸಿಸ್‌ ಐವನ್‌ ಆಳ್ವ ಅವರು ನೀಡಿದ ಖಾಸಗಿ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸಂತೆಕಟ್ಟೆಯ ನಿವಾಸಿ ಅನಿಲ್‌ ರಾಜ್‌ ಲೂವಿಸ್‌ ಅವರ ಪತ್ನಿ ರೇಚೆಲ್‌ ವಿನಿತಾ ಲೂವಿಸ್‌ ಅವರು ಫ್ರಾನ್ಸಿಸ್‌ ಐವನ್‌ ಆಳ್ವ ಅವರಿಗೆ ನೀಡಿದ ಜಾಗವನ್ನು ಗ್ಯಾರಿ ಬ್ರಾಯಾನ್‌ ಡಿ’ಸೋಜಾ ಹಾಗೂ ಪೀಟರ್‌ ಡಿ’ಸೋಜಾ ಅವರೊಂದಿಗೆ ಸೇರಿ ಫ್ರಾನ್ಸಿಸ್‌ ಐವನ್‌ ಆಳ್ವ ಅವರಿಗೆ ಮಾರಾಟ ಮಾಡಿದ್ದು ತಿಳಿದು ಕೂಡ ಖರೀದಿ ಮಾಡಿ ತನಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿದ್ದಾರೆ ಎಂದು ಫ್ರಾನ್ಸಿಸ್‌ ಐವನ್‌ ಆಳ್ವ ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next