Advertisement

Udupi ಪೆಟ್ರೋಲ್‌ ಹಾಕದ ಕಾರಣಕ್ಕೆ ಹಲ್ಲೆ

01:32 AM May 19, 2024 | Team Udayavani |

ಉಡುಪಿ: ಪೆಟ್ರೋಲ್‌ ಪಂಪ್‌ ಒಂದಕ್ಕೆ ಎರಡು ಬೈಕ್‌ಗಳಲ್ಲಿ ಮಧ್ಯ ರಾತ್ರಿ ಪಾನಮತ್ತರಾಗಿ ಬಂದ ಯುವಕರು ಪೆಟ್ರೋಲ್‌ ಹಾಕದೆ ಇದ್ದದ್ದಕ್ಕೆ ಸಿಬಂದಿಗೆ ಥಳಿಸಿದ ಘಟನೆ ಶುಕ್ರವಾರ ತಡರಾತ್ರಿ ಇಂದ್ರಾಳಿಯಲ್ಲಿ ನಡೆದಿದೆ.

Advertisement

ತಡರಾತ್ರಿ ಬಂದ ಯುವಕರಿಗೆ, ಬಂಕ್‌ ಬಂದ್‌ ಮಾಡಿದ ಅನಂತರ ಪೆಟ್ರೋಲ್‌ ಇಲ್ಲ ಎಂದು ಸಿಬಂದಿ ತಿಳಿಸಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ನಾಲ್ವರು ಯುವಕರ ಪೈಕಿ ಓರ್ವ ಹಲ್ಲೆ ನಡೆಸಿದ್ದಾರೆ. ಪ್ರದೀಪ್‌ ಕುಮಾರ್‌ (26) ಹಲ್ಲೆಗೊಳಗಾದ ಯುವಕ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೆಟ್ರೋಲ್‌ ಪಂಪ್‌ ಮಾಲಕರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಈ ವೇಳೆ ಯುವಕರ ತಂಡ ಬೈಕ್‌ ಅನ್ನು ತಳ್ಳಿಕೊಂಡು ಪರಾರಿಯಾಗಿದೆ. ಗಾಯಾಳುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next