Advertisement

ಉಡುಪಿ: ನಿಂತಿದ್ದ ಕಾರಿಗೆ ಮತ್ತೂಂದು ಕಾರು ಢಿಕ್ಕಿ

09:34 AM Oct 23, 2017 | |

ಉಡುಪಿ: ನಿಂತಿದ್ದ ಕಾರಿಗೆ ಮತ್ತೂಂದು ಕಾರು ಢಿಕ್ಕಿ ಹೊಡೆದ ಪರಿಣಾಮ ಎರಡೂ ಕಾರುಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಶನಿವಾರ ತಡರಾತ್ರಿ ಬನ್ನಂಜೆಯ ಲಾಡ್ಜ್ ಒಂದರ ಮುಂಭಾಗದಲ್ಲಿ ಸಂಭವಿಸಿದೆ.

Advertisement

ಬೆಂಗಳೂರು ಮೂಲದ ತಿರುಮಲ ಗೌಡ ಅವರು ಕುಟುಂಬ ಸಮೇತರಾಗಿ ಉಡುಪಿಗೆ ತೀರ್ಥಯಾತ್ರೆಗೆ ಆಗಮಿಸಿದ್ದು, ರವಿವಾರ  ಮುಂಜಾನೆ 3 ಗಂಟೆಗೆ ಬೆಂಗಳೂರು ತೆರಳುವ ಸಲುವಾಗಿ ಲಾಡ್ಜ್ ಮುಂಭಾದಲ್ಲಿ ಕಾರು ನಿಲ್ಲಿಸಿ ಲಾಡ್ಜ್ನಲ್ಲಿ ತಂಗಿದ್ದರು. ಅವೇಳೆ ಸಿಟಿ ಬಸ್‌  ನಿಲ್ದಾಣದಿಂದ ಕರಾವಳಿ ಭಾಗಕ್ಕೆ ತೆರಳುತ್ತಿದ್ದ ಕಾರೊಂದು ವೇಗವಾಗಿ ಬಂದು ತಿರುಮಲ ಗೌಡ ಅವರ ನಿಂತಿದ್ದ ಕಾರಿನ ಎಡಬದಿಗೆ ಗುದ್ದಿದೆ. 

ಢಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next