Advertisement

ಉಡುಪಿ: 10 ಕಟ್ಟಡ, 20 ವಿದ್ಯುತ್‌ ಕಂಬಗಳಿಗೆ ಹಾನಿ

06:00 AM Jun 10, 2018 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಭಾರೀ ಮಳೆಯಾಗಿದ್ದು ಒಟ್ಟು 10 ಕಟ್ಟಡಗಳಿಗೆ ಹಾನಿಯಾಗಿದೆ. ಕಾಪು ತಾಲೂಕಿನಲ್ಲಿ 8, ಉಡುಪಿ ತಾ. 1 ಪ್ರಕರಣ, ಕಾರ್ಕಳ ತಾ. ಹೆರ್ಮುಂಡೆ ದೇವಸ್ಥಾನದ ಆವರಣಗೋಡೆ ಕುಸಿತ ಸೇರಿ 10 ಪ್ರಕರಣಗಳು ದಾಖಲಾಗಿವೆ. ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ಮೊದಲಾದೆಡೆ ಉತ್ತಮ ಮಳೆಯಾಯಿತು. 

Advertisement

ಉಡುಪಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗಿನ ಜಾವ ಬೀಸಿದ ಬಲವಾದ ಗಾಳಿಗೆ ಹಲವೆಡೆ ವಿದ್ಯುತ್‌ ಕಂಬಗಳು ಬಿದ್ದಿವೆ. ಮಣಿಪಾಲ ಪರಿಸರದಲ್ಲಿ ಸುಮಾರು 20ರಷ್ಟು ಕಂಬಗಳಿಗೆ ಹಾನಿಯಾಗಿದೆ. ವಿದ್ಯುತ್‌ ಮರುಸಂಪರ್ಕ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯಾವರ ಪಡುಕೆರೆಯಲ್ಲಿ ಸುಂದರಿ ಅವರ ಮನೆಗೆ ತೆಂಗಿನ ಮರ ಬಿದ್ದು 20,000 ರೂ. ಹಾನಿಯಾಗಿದೆ. ಶನಿವಾರ ಸಂಜೆ ಪರ್ಕಳ ಗರೋಡಿ ರಸ್ತೆಯಲ್ಲಿ ವಿದ್ಯುತ್‌ ಕಂಬ ಮತ್ತು ರಸ್ತೆಗೆ ಮರಬಿದ್ದಿತ್ತು. ಅನಂತರ ಅಗ್ನಿಶಾಮಕ ದಳದವರುಬಂದು ರಸ್ತೆ ತೆರವುಗೊಳಿಸಿದರು. ಪರಿಸರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. 

ಬ್ರಹ್ಮಾವರ: ಮನೆಗಳಿಗೆ ಹಾನಿ
ಬ್ರಹ್ಮಾವರ: ಗಾಳಿ ಮಳೆ ಪರಿಣಾಮ ವಾರಂಬಳ್ಳಿ ಗ್ರಾಮ ಉಪ್ಪಿನಕೋಟೆಯ ಎಸ್ಪೆಥಿನ ಡಿ’ಸೋಜಾ, ಆರೂರು ಬೆಳಾರಿನ ಕೂಸು ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next