Advertisement

ಉದ್ಘರ್ಷ ಚಿತ್ರೀಕರಣ ಮುಗಿತು

08:42 AM Jan 08, 2019 | |

ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಚಿತ್ರಗಳ ಖ್ಯಾತಿಯ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ “ಉದ್ಘರ್ಷ’ದ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಚಿತ್ರದ ಚಿತ್ರೀಕರಣದ ಜೊತೆ ಜೊತೆಗೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನೂ ನಡೆಸುತ್ತಿರುವ ದೇಸಾಯಿ ಚಿತ್ರದ ಬಹುತೇಕ ಎಡಿಟಿಂಗ್‌ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಬಾಕಿಯಿದ್ದ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಮತ್ತು ಚಿತ್ರತಂಡ ಸದ್ಯ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣಕ್ಕೆ ಮಂಗಳಹಾಡಿದೆ.

Advertisement

“ಉದ^ರ್ಷ’ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ “ಉದ^ರ್ಷ’ ಎಂಬ ಹೆಸರಿನಲ್ಲಿ ಮತ್ತು ತಮಿಳಿನಲ್ಲಿ “ಉಚ್ಚಕಟ್ಟಮ್‌’ ಎನ್ನುವ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಉಳಿದಂತೆ ಬೆಂಗಳೂರು, ಹೈದರಾಬಾದ್‌ ಹಾಗೂ ಕೇರಳದ ಹಲವು ಸ್ಥಳಗಳಲ್ಲಿ ಚಿತ್ರದ ಕೆಲ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

“ಉದ^ರ್ಷ’ ಚಿತ್ರದಲ್ಲಿ “ಸಿಂಗಂ 3′ ಖ್ಯಾತಿಯ ಠಾಕೂರ್‌ ಅನೂಪ್‌ ಸಿಂಗ್‌ ನಾಯಕ ನಟರಾಗಿ ನಟಿಸಿದ್ದರೆ, ತಮಿಳಿನ “ಕಬಾಲಿ’ ಖ್ಯಾತಿಯ ಸಾಯಿ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್‌ ನಾಯಕಿಯರಾಗಿ ಅಭಿನಯಿಸಿದ್ದಾರೆ . ಉಳಿದಂತೆ ಬಾಲಿವುಡ್‌ ನಟ ಕಬೀರ್‌ ಸಿಂಗ್‌ ದುಹಾನ್‌, ತೆಲುಗು ನಟ ಪ್ರಭಾಕರ್‌,ಶ್ರವಣ್‌ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್‌, ಕಿಶೋರ್‌, ಹರ್ಷಿಕಾ ಪೂಣತ್ಛ ಮುಂತಾದವರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next