Advertisement

ಪತ್ನಿಯರ ಮೂಲಕ ಎಂವಿಎ ಉಳಿಸಲು ಯತ್ನ: ರಂಗಕ್ಕೆ ಇಳಿದ ಉದ್ಧವ್‌ ಪತ್ನಿ ರಶ್ಮಿ ಠಾಕ್ರೆ

07:34 AM Jun 27, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ ಅಘಾಡಿ ಸರಕಾರ ಉಳಿಸುವ ನಿಟ್ಟಿನಲ್ಲಿ ಸಿಎಂ ಉದ್ಧವ್‌ ಠಾಕ್ರೆಯವರ ಪತ್ನಿ ರಶ್ಮಿ ಠಾಕ್ರೆ ರಂಗಕ್ಕೆ ಇಳಿದಿದ್ದಾರೆ.

Advertisement

ಈ ಮೂಲಕ ಬಿಕ್ಕಟ್ಟನ್ನು ಎದುರಿಸು­ತ್ತಿರುವ ಪತಿಗೆ ನೆರವಾಗು ತ್ತಿದ್ದಾರೆ. ಅದು ಹೇಗೆ ಬಲ್ಲಿರಾ? ಸಚಿವ ಏಕನಾಥ ಶಿಂಧೆಯವರ ಜತೆಗೆ ತೆರಳಿರುವ ಶಾಸಕರ ಪತ್ನಿಯರನ್ನು ಸಂಪರ್ಕಿಸುವ ಯತ್ನವನ್ನು ಅವರು ಆರಂಭಿಸಿದ್ದಾರೆ.

ಉದ್ಧವ್‌ ಠಾಕ್ರೆ ಪರವೇ ನಿಲ್ಲುವಂತೆ ಪತ್ನಿಯರಿಗೆ ಫೋನ್‌ ಮಾಡ­ಲಾರಂಭಿಸಿ­ದ್ದಾರೆ. ಮುಖ್ಯಮಂತ್ರಿ ಪತ್ನಿ ಫೋನ್‌ ಮಾಡಿದ್ದಾರೆ ಎಂದ ಮೇಲೆ ಅದನ್ನು ನಿರಾಕರಿಸಲು ಸಾಧ್ಯವೇ?

ಹೀಗಾಗಿ, ಪತ್ನಿಯರು ಪತಿಯಂದಿರ ಮನವೊಲಿಕೆಗೆ ಮನಸ್ಸು ಮಾಡಬಹುದು ಎಂಬ ದೂರಾಲೋಚನೆ ರಶ್ಮಿ ಠಾಕ್ರೆ ಅವರದ್ದು. ಹೀಗಾಗಿ ಕೆಲವು ಶಾಸಕರ ಪತ್ನಿಯರು ದೂರದ ಗುವಾಹಾಟಿ­ಯಲ್ಲಿರುವ ತಮ್ಮ ಪತಿಯಂದಿರಿಗೆ ಡಯಲ್‌ ಮಾಡಿದ್ದಾರಂತೆ!

ಶಿಂಧೆ ಹೆಸರು ಇಲ್ಲ: ಭಿನ್ನಮತೀಯ ಶಾಸಕರಿಗೆ ಮಹಾಸರಕಾರ ಭದ್ರತೆ ನೀಡಿಲ್ಲ ಎಂಬ ದೂರುಗಳ ನಡುವೆಯೇ ಕೇಂದ್ರವು ಶಿವಸೇನೆಯ 16 ಭಿನ್ನ­ಮತೀಯ ಶಾಸಕರಿಗೆ “ವೈ’ ಮಾದರಿ ಭದ್ರತೆ ನೀಡಲು ಆದೇಶ ನೀಡಿದೆ. ಅದರ ಅನ್ವಯ ಮುಂದಿನ ದಿನಗಳಲ್ಲಿ ಸಿಆರ್‌ಪಿಎಫ್ ಯೋಧರು ಶಾಸಕರಿಗೆ ಭದ್ರತೆ ನೀಡಲಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಸಚಿವ ಏಕನಾಥ ಶಿಂಧೆ ಹೆಸರು ಇಲ್ಲದಿರುವುದು ಅಚ್ಚರಿ ತಂದಿದೆ.

Advertisement

ಕೇಂದ್ರದ ನಿರ್ಧಾರವನ್ನು ಮಹಾ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಆಕ್ಷೇಪಿಸಿ ದ್ದಾರೆ. “ಕಾಶ್ಮೀರ ಪಂಡಿತರಿಗೆ ಸಿಆರ್‌ಪಿಎಫ್ ಭದ್ರತೆ ನೀಡಬೇಕಾಗಿತ್ತು. ಭಿನ್ನಮತೀಯ ಶಾಸಕರಿಗೆ ಅಲ್ಲ’ ಎಂದಿದ್ದಾರೆ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿ­ದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಸೋಲು­ವಂತೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಶಿಂಧೆಗೆ ಸಿಎಂ ಹುದ್ದೆ ಆಫ‌ರ್‌: ಭಿನ್ನಮತೀಯ ಶಾಸಕರು ಗುವಾಹಾಟಿಯಲ್ಲಿ ಬಂಧಿಗಳಾಗಿದ್ದಾರೆ ಎಂದು ಹೇಳಿರುವ ಸಚಿವ ಆದಿತ್ಯ ಠಾಕ್ರೆ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೇ 30ರಂದು ನಡೆದಿದ್ದ ಸಭೆಯಲ್ಲಿ ಸಿಎಂ ಉದ್ಧವ್‌ ಠಾಕ್ರೆ ಅವರು ಏಕನಾಥ ಶಿಂಧೆಗೆ ಸಿಎಂ ಹುದ್ದೆಯನ್ನು ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದಿದ್ದಾರೆ. ಈ ಸಂಚಿನಲ್ಲಿ ಬಿಜೆಪಿ ಇಲ್ಲ ಎಂದಾದರೆ, ಗುವಾಹಾಟಿಯಲ್ಲಿ ಭಿನ್ನಮತೀ­ಯರನ್ನು ಅವರೇಕೆ ಭೇಟಿಯಾಗುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next