Advertisement

Ram Temple; ಉದ್ಧವ್ ಠಾಕ್ರೆಗೆ 2 ದಿನ ಮೊದಲು ಸ್ಪೀಡ್ ಪೋಸ್ಟ್ ಮೂಲಕ ಆಹ್ವಾನ!

06:12 PM Jan 21, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಶಿವಸೇನೆ ನಾಯಕ ಉದ್ಧವ್ ಠಾಕ್ರೆಗೆ ಅವರಿಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ಕ್ಷಣಗಳ ಮುನ್ನ ಶನಿವಾರ ಸ್ಪೀಡ್ ಪೋಸ್ಟ್ ಮೂಲಕ ಆಹ್ವಾನ ನೀಡಲಾಗಿದೆ.

Advertisement

ಸಮಾರಂಭಕ್ಕೆ ಉದ್ಧವ್ ಅವರನ್ನು ಆಹ್ವಾನಿಸದಿದ್ದಕ್ಕಾಗಿ ಉದ್ಧವ್ ಬಣ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ನಂತರ ಭಾರಿ ಚರ್ಚೆ ನಡೆದಿತ್ತು. ಇದೀಗ ಅಂಚೆ ಮೂಲಕ ಆಹ್ವಾನವು ಉದ್ಧವ್‌ ಅವರಿಗೆ ತಲುಪಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್ ”ಈ ರೀತಿ ಮಾಡಿದುದಕ್ಕೆ ಭಗವಾನ್ ರಾಮನು ಶಪಿಸುತ್ತಾನೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

“ನೀವು ಸೆಲೆಬ್ರಿಟಿಗಳು ಮತ್ತು ಚಲನಚಿತ್ರ ತಾರೆಯರಿಗೆ ವಿಶೇಷ ಆಹ್ವಾನ ನೀಡುತ್ತಿದ್ದೀರಿ. ಅವರಿಗೂ ರಾಮಜನ್ಮಭೂಮಿಗೂ ಯಾವುದೇ ಸಂಬಂಧವಿಲ್ಲ, ಆದರೆ ನೀವು ಠಾಕ್ರೆ ಕುಟುಂಬವನ್ನು ಈ ರೀತಿ ನಡೆಸುತ್ತಿದ್ದೀರಿ? ರಾಮ ಜನ್ಮಭೂಮಿ ಆಂದೋಲನದಲ್ಲಿ ಠಾಕ್ರೆ ಪ್ರಮುಖ ಪಾತ್ರವನ್ನು ವಹಿಸಿದ್ದರು. ಶ್ರೀರಾಮ ನಿಮ್ಮನ್ನು ಕ್ಷಮಿಸುವುದಿಲ್ಲ ಮತ್ತು ಇದಕ್ಕಾಗಿ ಶಪಿಸುತ್ತಾನೆ. ನೀವು ಭಗವಾನ್ ರಾಮನನ್ನು ಪ್ರಾರ್ಥಿಸುತ್ತಿದ್ದೀರಿ ಮತ್ತು ರಾವಣನಂತೆ ಸರಕಾರವನ್ನು ನಡೆಸುತ್ತಿದ್ದೀರಿ ”ಎಂದು ಆಕ್ರೋಶ ಹೊರ ಹಾಕಿರುವ ಸಂಜಯ್ ರಾವತ್ ಅವರ ಹೇಳಿಕೆಯನ್ನು ಸಾಮ್ನಾ ಉಲ್ಲೇಖಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next