Advertisement

ಉದಯವಾಣಿಗೆ ಓದುಗರ ಮೆಚ್ಚುಗೆ

12:45 AM Jan 23, 2019 | Team Udayavani |

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿದ ಹಿನ್ನೆಲೆಯಲ್ಲಿ ‘ಉದಯವಾಣಿ’ಯಲ್ಲಿ ಮಂಗಳವಾರ ಪ್ರಕಟಿಸಿದ್ದ ವಿಶೇಷ ಪುಟಗಳಿಗೆ ಓದುಗರ ವಲಯ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಉದಯವಾಣಿ’ ಅಕ್ಷರಗಳ ಮೂಲಕ ಸ್ವಾಮೀಜಿಯರಿಗೆ ನುಡಿ ನಮನ ಸಲ್ಲಿಸಿದೆ. ಮುಖಪುಟದಲ್ಲಿ ಅವರ ಭಾವಚಿತ್ರ ಪ್ರಕಟಿಸಿ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ. ಶ್ರೀಗಳ ತ್ರಿವಿಧ ದಾಸೋಹ, ಜೀವನ, ಸಾಧನೆಯ ವಿಸ್ತೃತವಾದ ವಿವರ ಹಾಗೂ ಮಾಹಿತಿಯನ್ನು ನೀಡಲಾಗಿದೆ ಎಂದು ಓದುಗರು ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ನಾಲ್ಕು ತಿಂಗಳ ಹಿಂದೆ ‘ಉದಯವಾಣಿ’ ಹೊರತಂದಿದ್ದ ವಿಶೇಷ ಸಂಚಿಕೆ ‘ಶಿಕ್ಷಣ ಗಂಗಾ’ ಲೋಕಾರ್ಪಣೆ ಮಾಡಿದ್ದ ಡಾ. ಶಿವಕುಮಾರ ಸ್ವಾಮೀಜಿಗಳು ಎಲ್ಲ ಲೇಖನಗಳನ್ನು ಓದಿ ಪತ್ರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next