Advertisement

ಉದಯವಾಣಿ ಚಿಗುರು ಚಿತ್ರ ಸ್ಪರ್ಧೆ: ನ. 5 ಕೊನೆ ದಿನ

12:51 AM Nov 03, 2019 | mahesh |

ಉಡುಪಿ: ಸುವರ್ಣ ಸಂಭ್ರಮದಲ್ಲಿರುವ ಜನಮನದ ಜೀವನಾಡಿ ಉದಯವಾಣಿ ವರ್ಷಂಪ್ರತಿ ನಡೆಸುತ್ತಿರುವ “ಚಿಗುರು ಚಿತ್ರ’ ಮಕ್ಕಳ ಫೋಟೊ ಸ್ಪರ್ಧೆಗೆ ಮಕ್ಕಳ ಫೋಟೋಗಳನ್ನು ಆಹ್ವಾನಿಸುತ್ತಿದೆ. ಐದು ವರ್ಷ ಕೆಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಈ ಸ್ಪರ್ಧೆಗೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ.

Advertisement

ಮಕ್ಕಳ ಸಹಜ, ಆಕರ್ಷಕ ಭಂಗಿಯ ಕಲರ್‌ ಫೋಟೋಗಳಿರಲಿ. ಒಂದೇ ಮಗುವಿನ ವಿವಿಧ ಭಂಗಿಯ ಫೋಟೋಗಳನ್ನು ಕಳುಹಿಸಬಹುದು. ನ. 5ರ ಒಳಗೆ ಫೋಟೋಗಳನ್ನು ಕಳುಹಿಸಬೇಕಾಗಿದೆ. ವಿಜೇತ ಮಕ್ಕಳ ಫೋಟೋಗಳನ್ನು ನ. 14ರ ಉದಯವಾಣಿಯಲ್ಲಿ ಪ್ರಕಟಿಸಲಾಗುತ್ತದೆ.

ಫೋಟೋಗಳನ್ನು ಮಣಿಪಾಲದಲ್ಲಿರುವ ಉದಯವಾಣಿ ಕೇಂದ್ರ ಕಚೇರಿ ಅಥವಾ ಮಂಗಳೂರು, ಬಿ.ಸಿ. ರೋಡ್‌, ಬೆಳ್ತಂಗಡಿ, ಪುತ್ತೂರು, ಕಾಸರಗೋಡು, ಉಡುಪಿ, ಕಾರ್ಕಳ ಮತ್ತು ಕುಂದಾಪುರದಲ್ಲಿರುವ ಉದಯವಾಣಿ ಕಚೇರಿಗೆ ಕಳುಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next