Advertisement

ಉಚ್ಚಿಲ ಪೆರಿಬೈಲು ತೀವ್ರ ಕಡಲ್ಕೊರೆತ ಪ್ರದೇಶಕ್ಕೆ ಯು. ಟಿ ಖಾದರ್ ಭೇಟಿ

03:12 PM Aug 11, 2019 | Team Udayavani |

ಉಳ್ಳಾಲ: ಮಾಜಿ ಸಚಿವ, ಶಾಸಕ ಯು. ಟಿ ಖಾದರ್ ಅವರು ಉಚ್ಚಿಲ ಪೆರಿಬೈಲಿಗೆ ಭೇಟಿ ನೀಡಿ ತೀವ್ರ ಕಡಲ್ಕೊರೆತ ಪ್ರದೇಶಗಳ ಬಗ್ಗೆ ,ಮಾಹಿತಿ ಪಡೆದರು.

Advertisement

ನಂತರ ಮಾತನಾಡಿದ ಅವರು, ಸರಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ಈಗಾಗಲೇ ಚರ್ಚಿಸಲಾಗಿದ್ದು, ಶೀಘ್ರವೇ ಹಾನಿಗೀಡಾದ ರಸ್ತೆ, ಮನೆಗಳಿಗೆ ಪರಿಹಾರ ಹಾಗೂ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಈ ಸಂದರ್ಭ ಸ್ಥಳೀಯ ಮುಖಂಡರುಗಳಾದ ಈಶ್ವರ್ ಉಳ್ಳಾಲ್, ಸುರೇಶ್ ಭಟ್ನಗರ, ದಿನೇಶ್ ಕುಂಪಲ, ವಿಶಾಲ್ ಕೊಲ್ಯ, ಸೋಮೇಶ್ವರ ಮುಖ್ಯಾಧಿಕಾರಿ ವಾಣಿ ಆಳ್ವ, ಮುಂತಾದವರು ಉಪಸ್ಥಿತರಿದ್ದರು.

ಅಂಡರ್ ಪಾಸ್ ಸಮಸ್ಯೆ ಪರಿಹಾರಕ್ಕೆ ಆದೇಶ
ರಾಷ್ಟ್ರೀಯ ಹೆದ್ದಾರಿ ಉಚ್ಛಿಲ ಅಂಡರ್ ಪಾಸ್ ನಲ್ಲಿ ಕಳೆದ ಹಲವಾರು ಸಮಯಗಳಿಂದ ನೀರು ನಿಂತು ಸಾರ್ವಜನಿಕರಿಗೆ, ವಿಧ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಶಾಸಕ ಯು.ಟಿ. ಖಾದರ್ ಸಂಭಂದಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಈ ದಿನವೇ ಸಮಸ್ಯೆ ಬಗೆ ಹರಿಸಲು ಆದೇಶ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next