Advertisement

UPS; ಯು ಅಂದರೆ ಮೋದಿ ಸರಕಾರದ ಯು ಟರ್ನ್: ಖರ್ಗೆ ಟೀಕಾ ಪ್ರಹಾರ

05:55 PM Aug 25, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರವು ಸರಕಾರಿ ನೌಕರರಿಗೆ ಹೊಸ ಏಕೀಕೃತ ಪಿಂಚಣಿ ಯೋಜನೆ (UPS) ಜಾರಿಗೆ ತರಲು ತೀರ್ಮಾನಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

Advertisement

ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಯುಪಿಎಸ್‌ನಲ್ಲಿನ ‘ಯು’ ಮೋದಿ ಸರಕಾರದ “ಯು-ಟರ್ನ್ಸ್” ಅನ್ನು ಸೂಚಿಸುತ್ತದೆ. ಜೂನ್ 4 ರ ನಂತರ, ಪ್ರಧಾನಿಯ ಅಧಿಕಾರದ ದುರಹಂಕಾರದ ಮೇಲೆ ಜನರ ಶಕ್ತಿ ಮೇಲುಗೈ ಸಾಧಿಸಿದೆ.ದೀರ್ಘಾವಧಿಯ ಬಂಡವಾಳ ಲಾಭ/ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ರೋಲ್‌ಬ್ಯಾಕ್. ವಕ್ಫ್ ಬಿಲ್ ಅನ್ನು ಜೆಪಿಸಿಗೆ ಕಳುಹಿಸುವುದು. ಬ್ರಾಡ್‌ಕಾಸ್ಟ್ ಬಿಲ್‌ನ ರೋಲ್‌ಬ್ಯಾಕ್. ಲ್ಯಾಟರಲ್ ಎಂಟ್ರಿಯನ್ನು ಹಿಂದಕ್ಕೆ ಪಡೆಯಲಾಗಿದೆ. ನಾವು ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ ಮತ್ತು ಈ ನಿರಂಕುಶ ಸರಕಾರದಿಂದ 140 ಕೋಟಿ ಭಾರತೀಯರನ್ನು ರಕ್ಷಿಸುತ್ತೇವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

UPS ಜಾರಿಯಿಂದ ಖಚಿತ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತ ಕನಿಷ್ಠ ಪಿಂಚಣಿಯನ್ನು ನೌಕರರು ಪಡೆಯಲಿದ್ದಾರೆ. ಈ ಹೊಸ ಯೋಜನೆ ಮುಂದಿನ ವರ್ಷ ಎಪ್ರಿಲ್‌ 1ರಂದು ಜಾರಿಗೆ ಬರಲಿದ್ದು, 23 ಲಕ್ಷ ಸರಕಾರಿ ನೌಕರರಿಗೆ ಲಾಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next