Advertisement

ಹಂಪಿ ನದಿಯಲ್ಲಿ ಕೊಚ್ಚಿ ಹೋದ ಪ್ರವಾಸಕ್ಕೆ ಆಗಮಿಸಿದ್ದ ಇಬ್ಬರು ಯುವಕರು

06:57 PM Dec 28, 2022 | Team Udayavani |

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ನದಿಯಲ್ಲಿ ಈಜುಲು ತೆರಳಿದ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬುಧವಾರ ನಡೆದಿದೆ.

Advertisement

ಬೆಂಗಳೂರು ಮೂಲದ ಹರೀಶ್ (18) ಮತ್ತು ಜೀವನ್ (18) ನದಿಯಲ್ಲಿ ಕೊಚ್ಚಿ ಹೋದ ಯುವಕರು. ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ಯುವಕರು, ಪುರಂದರ ದಾಸರ ಮಂಟಪದ ಬಳಿ ಹರಿಯುತ್ತಿರುವ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದಾರೆ.

ಗೆಳೆಯನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಮಂಗಳವಾರ ಆಗಮಿಸಿದ್ದ ಯುವಕರು ಎಂಟು ಜನ ಗೆಳೆಯರೊಂದಿಗೆ ಹಂಪಿಗೆ ಭೇಟಿ ನೀಡಿದ್ದರು. ಈ ವೇಳೆ ಪುರಂದರ ಮಂಟಪದ ಹತ್ತಿರ ಹಾದು ಹೋಗಿರುವ ನದಿಯಲ್ಲಿ ಈಜಾಡಲು ನೀರಿಗೆ ಇಳಿದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಹೊರ ಬರಲಾರದೇ ಜಲ ಸಮಾಧಿಯಾಗಿದ್ದಾರೆ. ಹಂಪಿ ಪೊಲೀಸರು, ಅಗ್ನಿಶಾಮಕದ ದಳದ ಸಿಬಂದಿಗಳು ಹಾಗೂ ನುರಿತ ಈಜುಗಾರರು, ನಾಪತ್ತೆಯಾದ ಯುವಕರ ಶೋಧ ನಡೆಸಿದ್ದಾರೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next