Advertisement

ಉತ್ತರಾಖಂಡ; ಚಿರತೆ ಭಯಕ್ಕೆ ಊರೇ ಖಾಲಿ ಮಾಡಿದ ಕುಟುಂಬ

09:09 AM Sep 03, 2022 | Team Udayavani |

ಡೆಹ್ರಾಡೂನ್‌: ಚಿರತೆಯ ಭಯದಿಂದಾಗಿ ಉತ್ತರಾಖಂಡದ ಪೌರಿ ಜಿಲ್ಲೆಯ ದುಗಡ್ಡ ಮತ್ತು ಪೋಕ್ರಾ ಬ್ಲಾಕ್‌ಗಳು ಸಂಪೂರ್ಣವಾಗಿ ಖಾಲಿಯಾಗಿವೆ.

Advertisement

ಸುಮಾರು 16ಕಿ.ಮೀ. ದೂರದಲ್ಲಿರುವ  ನಗರದಲ್ಲಿ ಈ ಎಲ್ಲ ಕುಟುಂಬಗಳು ಬಾಡಿಗೆ ಮನೆ ಮಾಡಿಕೊಂಡು ಜೀವಿಸಲಾರಂಭಿಸಿವೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಮನೆ ಅಂಗಳದಲ್ಲಿ ಆಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಚಿರತೆ ಹೊತ್ತುಕೊಂಡು ಹೋಗಿತ್ತು.

ಹಾಗೆಯೇ ಕಳೆದ ತಿಂಗಳು ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ಬರುತ್ತಿದ್ದ ಮಹಿಳೆಯನ್ನೇ ಚಿರತೆ ಎಳೆದುಕೊಂಡು ಹೋಗಿತ್ತು.

ಈ ಎರಡು ಘಟನೆಗಳು ಜನರಲ್ಲಿ ಭಯ ಹುಟ್ಟಿಸಿದೆ. ಆ ಹಿನ್ನೆಲೆ ಪ್ರತಿಯೊಬ್ಬರೂ ಮನೆ ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ.

Advertisement

ಸುತ್ತಮುತ್ತಲಿನ ಹಳ್ಳಿಗಳ ಜನರೂ ಮನೆಯಿಂದ ಹೊರಬರಲು ಭಯ ಪಡುತ್ತಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next