Advertisement

ವರ್ಗಾವಣೆ ತಪ್ಪಿಸಲು ಮಕ್ಕಳನ್ನೇ ಒತ್ತೆ ಇಟ್ಟುಕೊಂಡ ಶಿಕ್ಷಕಿಯರು!

07:25 PM Apr 23, 2022 | Team Udayavani |

ಲಕ್ನೋ: ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಯನ್ನು ತಪ್ಪಿಸಲೆಂದು ಶಿಕ್ಷಕಿಯರಿಬ್ಬರು ಶಾಲೆಯ ಮಕ್ಕಳನ್ನೇ ಒತ್ತೆಯಾಳುಗಳಾಗಿ ಮಾಡಿಕೊಂಡು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Advertisement

ಲಖೀಂಪುರ ಖೇರಿ ಜಿಲ್ಲೆಯ ಕಸ್ತೂರ್ಬಾ ಗಾಂಧಿ ವಿದ್ಯಾರ್ಥಿನಿಯರ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಶಿಕ್ಷಕಿಯರಾಗಿರುವ ಮನೋರಮಾ ಮಿಶ್ರಾ ಮತ್ತು ಗೋಲ್ಡೀ ಕತಿಯಾರ್‌ರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಸೂಚನೆ ಹೊರಡಿಸಿದ್ದರು. ಆದರೆ ಇದರಿಂದಾಗಿ ಮನನೊಂದಿದ್ದ ಶಿಕ್ಷಕರಿಯರು ಹಾಸ್ಟೆಲ್‌ನಲ್ಲಿದ್ದ 20 ವಿದ್ಯಾರ್ಥಿನಿಯರನ್ನು ಸಂಜೆ 7 ಗಂಟೆಗೆ ಊಟ ಮುಗಿದ ನಂತರ ಕೊಠಡಿಯೊಂದರಲ್ಲಿ ಕೂರಿಸಿಕೊಂಡು, ತಮಗೆ ವರ್ಗಾವಣೆ ಆಗಿರುವ ವಿಚಾರ ತಿಳಿಸಿದ್ದಾರೆ.

ನಂತರ ನಮ್ಮನ್ನು ಇಲ್ಲೇ ಉಳಿಸಿಕೊಳ್ಳಲು ಹೋರಾಟ ಮಾಡಿ ಎಂದು ಹೇಳಿ, ಕೊಠಡಿಯಿಂದ ಹೊರಬಂದು, ಕೊಠಡಿಗೆ ಬೀಗ ಹಾಕಿದ್ದಾರೆ. ಮಕ್ಕಳನ್ನು ಹೊರಬಿಡಬೇಕೆಂದರೆ ವರ್ಗಾವಣೆ ಆದೇಶ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಭಯ ಬಿದ್ದ ವಿದ್ಯಾರ್ಥಿನಿಯರು ಜೋರಾಗಿ ಕೂಗಿಕೊಂಡಿದ್ದು, ಅದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಮಧ್ಯ ರಾತ್ರಿ ಹೊತ್ತಿನಲ್ಲಿ ವಿದ್ಯಾರ್ಥಿನಿಯರನ್ನು ರಕ್ಷಿಸಿದ್ದಾರೆ. ಮಕ್ಕಳ ಜೊತೆ ತಪ್ಪಾಗಿ ನಡೆದುಕೊಂಡಿರುವ ಶಿಕ್ಷಕಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಹೆಚ್ಚಿನ ತನಿಖೆಗೆಂದು ಜಿಲ್ಲಾ ಶಿಕ್ಷಣ ಇಲಾಖೆಯು ಸಮಿತಿಯೊಂದನ್ನು ರಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next