Advertisement

ಇಬ್ಬರು ಉಗ್ರರ ಬಂಧನ

03:33 AM May 14, 2019 | Team Udayavani |
ಬನಿಹಾಲ್: ಜಮ್ಮು ಪ್ರಾಂತ್ಯದಲ್ಲಿ ಭಯೋತ್ಪಾದನೆಯನ್ನು ಹರಡು ಪ್ರಯತ್ನಿಸುತ್ತಿದ್ದ ಲಷ್ಕರ್‌ ಎ ತೊಯ್ಬಾದ ಇಬ್ಬರು ಉಗ್ರರನ್ನು ಸೇನೆ ಬಂಧಿಸಿದೆ. ಬಂಧಿತರನ್ನು, ಆವಂತಿ ಪೊರಾದ ಶೌಕತ್‌ ಅಹ್ಮದ್‌ ಶೇಖ್‌ ಹಾಗೂ ಕುಲ್ಗಾಮ್‌ನ ತವೀಲ್ ಮೊಹಿಯುದ್ದೀನ್‌ ದಾರ್‌ ಎಂದು ಗುರುತಿಸಲಾಗಿದೆ. ಜಮ್ಮು ಕಾಶ್ಮೀರದ ಪೊಲೀಸ್‌ ಹಾಗೂ ರಾಷ್ಟ್ರೀಯ ರೈಫ‌ಲ್ಸ್ ಹಾಗೂ ಅರೆಸೇನಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರವಾದದ ಬಿಸಿ ಅತ್ಯಂತ ಜೋರಾಗಿರುವ ಪ್ರಾಂತ್ಯಗಳಲ್ಲೊಂದಾದ ರಾಂಬನ್‌ ಜಿಲ್ಲಾ ಪ್ರದೇಶದಲ್ಲಿ ಈ ಇಬ್ಬರೂ ಭಯೋತ್ಪಾದನೆಯ ಜಾಲವನ್ನು ವಿಸ್ತರಿಸಲು ಹೊಂಚು ಹಾಕಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next