Advertisement

ಬೆಳ್ತಂಗಡಿಯ ಸುದೆಮುಗೇರಿನಲ್ಲಿ ಯುವಕ, ಬಾಲಕಿ ನೇಣಿಗೆ ಶರಣು

10:17 AM Apr 16, 2019 | keerthan |

ಬೆಳ್ತಂಗಡಿ: ಬೆಳ್ತಂಗಡಿ ನಗರದ ಸುದೆಮುಗೇರಿನ ಬಾಡಿಗೆ ಮನೆಯೊಂದರಲ್ಲಿ ಯುವಕ ಹಾಗೂ ಬಾಲಕಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ರೆಂಕೆದಗುತ್ತು ನಿವಾಸಿ ಕಿರಣ್‌ಕುಮಾರ್‌ (29) ಹಾಗೂ ಲಾೖಲದ 16ರ ಹರೆಯದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಪರಸ್ಪರ ಪ್ರೀತಿಸುತ್ತಿದ್ದು, ಕಿರಣ್‌ ಪತ್ನಿ ಲವೀನಾ ವಿರೋಧಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸಲಾಗಿದೆ.

ಕಿರಣ್‌ಕುಮಾರ್‌ ಲಾೖಲದಲ್ಲಿ ಮೆಕ್ಯಾನಿಕ್‌ ಆಗಿದ್ದು, ಕೆಲವು ವರ್ಷ ಗಳ ಹಿಂದೆ ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಬಳಿಕ ಅವರ ಮಧ್ಯೆ ಭಿನ್ನಾಭಿಪ್ರಾಯ ಬಂದು ವಿಚ್ಛೇದ‌ನ ಪಡೆದಿದ್ದರು.

ಬಳಿಕ ಪುತ್ರಬೈಲಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಬಣಕಲ್‌ ಮೂಲದ ಲವೀನಾಳನ್ನು ಪ್ರೀತಿಸಿ ವಿವಾಹವಾಗಿದ್ದ. ಮೃತ ಕಿರಣ್‌ನ ಹೆತ್ತವರ ಮನೆ ರೆಂಕೆದಗುತ್ತಿನಲ್ಲಿದ್ದರೂ ಆತ ಮನೆಗೆ ಹೋಗುತ್ತಿರಲಿಲ್ಲ. ಕಿರಣ್‌-ಲವೀನಾ ದಂಪತಿ ಸುದೆಮುಗೇರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಇವರಿಬ್ಬರ ಜತೆ ಲವೀನಾಳ ಸಂಬಂಧಿಯಾಗಿದ್ದ ಬಾಲಕಿಯೂ ವಾಸವಿದ್ದಳು. ಈ ಬಾಲಕಿ ಮತ್ತು ಕಿರಣ್‌ ಬೈಕಿನಲ್ಲಿ ಸುತ್ತಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಳು ಮತ್ತು ಇದೇ ಕಾರಣಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು. ಎ. 14ರಂದು ಕೂಡ ತಡರಾತ್ರಿ ದಂಪತಿ ನಡುವೆ ಜಗಳವಾಗಿ ಹೊಡೆದಾಡಿಕೊಂಡಿದ್ದು, ಬಳಿಕ ಕಿರಣ್‌ ಪತ್ನಿ ಲವೀನಾಳನ್ನು ಮನೆಯಿಂದ ಹೊರ ಹಾಕಿದ್ದ ಎಂದು ಹೇಳಲಾಗುತ್ತಿದೆ.  ಬಳಿಕ ಲವೀನಾ ನೇರವಾಗಿ ಬೆಳ್ತಂಗಡಿ ಠಾಣೆಗೆ ಬಂದಿದ್ದಳಾದರೂ ಪತಿ ವಿರುದ್ಧ ದೂರು ನೀಡಲು ಸಿದ್ಧಳಿರಲಿಲ್ಲ. ಪತಿಯ ಹಲ್ಲೆ ಯಿಂದ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಹೋಗುವಂತೆ ಪೊಲೀಸರು ಸಲಹೆ ನೀಡಿದರೂ, ಆಕೆ ನೇರವಾಗಿ ಸಂಬಂಧಿಕರ ಮನೆಗೆ ಹೋಗಿದ್ದಳು.

Advertisement

ಸೋಮವಾರ ಬೆಳಗ್ಗೆ ಲವೀನಾ ಮನೆಗೆ ಬಂದಾಗ ಪತಿ ಮತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದುದು ಕಂಡು ಬಂದಿತ್ತು.  ಬೆಳ್ತಂಗಡಿ ಸಿಐ ಸಂದೇಶ್‌ ಪಿ.ಜಿ., ಎಸ್‌ಐ ರವಿ ಬಿ.ಎಸ್‌. ಹಾಗೂ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಪಕ್ಕಾಸು ತುಂಡಾಗಿತ್ತು!
ಕಿರಣ್‌ ಹಾಗೂ ಬಾಲಕಿಯು ಶಾಲಿನಿಂದ ನೇಣು ಬಿಗಿದುಕೊಂಡಿದ್ದರು. ನೇಣು ಹಾಕಿದ್ದ ಒಂದು ಪಕ್ಕಾಸು ತುಂಡಾಗಿದ್ದು, ಬಳಿಕ ಮತ್ತೂಂದು ಪಕ್ಕಾಸಿಗೆ ನೇಣು ಹಾಕಿಕೊಂಡಿದ್ದುದು ಕಂಡುಬಂದಿದೆ. ಬಾಲಕಿಯು ಎರಡು ತಿಂಗಳ ಹಿಂದೆ ಮನೆಬಿಟ್ಟು ಬಂದಿದ್ದಳು ಆಕೆಯ ಸಹೋದರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next