Advertisement

ಬೈಕ್ ಸಹಿತ ಸೇತುವೆಯಿಂದ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣ

10:17 AM Oct 05, 2019 | Team Udayavani |

ಹಾಸನ: ಬೈಕ್ ಸಮೇತ ಸೇತುವೆಯಿಂದ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ  ದಾರುಣ ಘಟನೆ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.

Advertisement

ಮೃತ ದುರ್ದೈವಿಗಳನ್ನು ರಂಗಸ್ವಾಮಿ . ಸಿದ್ದರಾಜು ಎಂದು ಗುರುತಿಸಲಾಗಿದ್ದು ಮೈಸೂರು ಜಿಲ್ಲೆಯ ಸಾಲಿಗ್ರಾಮ ಮೂಲದವರು.

ಬಸವನಹಳ್ಳಿ ಪಟ್ಟಣಕ್ಕೆಂದು ಬೈಕ್ ನಲ್ಲಿ ಹೋಗುವಾಗ ಈ ಅವಘಡ ಸಂಭವಿಸಿದೆ., ಈ ಹಿಂದೆ ಪ್ರವಾಹ ಬಂದ   ಸಂದರ್ಭದಲ್ಲಿ ಈ ಸೇತುವೆ ಕೊಚ್ಚಿ ಹೋಗಿದ್ದ ಕಾರಣ ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಕೊಣನೂರು ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next