Advertisement

ಎಲ್‌ಓಸಿಯಲ್ಲಿ ಸೇನೆಯಿಂದ ಪ್ರತಿದಾಳಿ:ಇಬ್ಬರು ಪಾಕ್‌ ಟ್ರೂಪರ್‌ ಹತ್ಯೆ

11:19 AM May 30, 2017 | Team Udayavani |

ಶ್ರೀನಗರ : ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಉರಿ ವಲಯದಲ್ಲಿ ಪಾಕಿಸ್ಥಾನದ ಬಾರ್ಡರ್‌ ಆ್ಯಕ್ಷನ್‌ ಟೀಮ್‌ (ಬ್ಯಾಟ್‌) ದಾಳಿಯನ್ನು ವಿಫ‌ಲ ಗೊಳಿಸುವಲ್ಲಿನ ಪ್ರತಿ ದಾಳಿಯಲ್ಲಿ ಭಾರತೀಯ ಸೇನೆ ನಿನ್ನೆ ಸೋಮವಾರ ಸಂಜೆ ಇಬ್ಬರು ಪಾಕಿಸ್ಥಾನೀ ಟ್ರೂಪರ್‌ಗಳನ್ನು ಗುಂಡಿಕ್ಕಿ ಕೊಂದಿರುವುದಾಗಿ ವರದಿಯಾಗಿದೆ. 

Advertisement

ಗಡಿ ನಿಯಂತ್ರಣ ರೇಖೆಯಲ್ಲಿನ ಉರಿ ವಲಯದಲ್ಲಿ ದಾಳಿಗೆ ಮುಂದಾಗಿದ್ದ  ಪಾಕಿಸ್ಥಾನೀ ಬ್ಯಾಟ್‌ ಟ್ರೂಪರ್‌ ಗಳಿಬ್ಬರನ್ನು  ಭಾರತೀಯ ವಿಶೇಷ ಪಡೆಯ ಯೋಧರು ಗುಂಡಿಕ್ಕಿ ಸಾಯಿಸಿದರೆಂದು ರಕ್ಷಣಾ ಮೂಲಗಳು ತಿಳಿಸಿವೆ. 

‘ಪಾಕ್‌ ಟ್ರೂಪರ್‌ಗಳ ಮೇಲಿನ ಮರು ದಾಳಿಯನ್ನು ಸಂಘಟಿಸಿದ ಭಾರತೀಯ ಸೇನೆಯು ಸರತಿಯ ಸಾಲಲ್ಲಿ ಸಾಗುತ್ತಿದ್ದ ಮೂರು ಪಾಕ್‌ ಸೇನಾ ವಾಹನಗಳ ಮೇಲೆ ನಮ್ಮ ಭಾರತೀಯ ಸೇನಾ ಪಡೆಯ ಟ್ರೂಪರ್‌ಗಳು ದಾಳಿ ಸಂಘಟಿಸಿ ಇಬ್ಬರು ಪಾಕ್‌ ಟ್ರೂಪರ್‌ಗಳನ್ನು ಗುಂಡಿಕ್ಕಿ ಕೊಂದರು’ ಎಂದು ರಕ್ಷಣಾ ಮೂಲಗಳು ಹೇಳಿವೆ. 

ಪಾಕಿಸ್ಥಾನದ ಕಡೆಯಿಂದ ಬ್ಯಾಟ್‌ ದಾಳಿ ನಡೆಯುವ ಸಂಭಾವ್ಯತೆಯನ್ನು ಮೊದಲೇ ಮನಗಂಡ ಭಾರತೀಯ ಟ್ರೂಪರ್‌ಗಳು ತಾವು ದಾಳಿ ಸಂಘಟಿಸುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಶ್ರೀನಗ – ಮುಜಫ‌ರಾಬಾದ್‌ ಸಾಪ್ತಾಹಿಕ ಬಸ್‌ ಸೇವೆಯನ್ನು ರದ್ದುಪಡಸಿದ್ದರು ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next