Advertisement

ದಾಂತೇವಾಡದಲ್ಲಿ ಶಸ್ತ್ರಾಸ್ತ್ರ ಸಹಿತ ಇಬ್ಬರು ನಕ್ಸಲರ ಶರಣಾಗತಿ

12:26 PM Jan 20, 2018 | Team Udayavani |

ರಾಯಪುರ : ಛತ್ತೀಸ್‌ಗಢದ ದಾಂತೇವಾಡದಲ್ಲಿ ಇಬ್ಬರು ನಕ್ಸಲರು ಶರಣಾಗತರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಈ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಜಿಲ್ಲಾ ಪೊಲೀಸ್‌ ಪ್ರಧಾನ ಕಾರ್ಯಾಲಯದಲ್ಲಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾದರು ಎದು ಉನ್ನತ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

ಶರಣಾದ ಇಬ್ಬರು ನಕ್ಸಲರಲ್ಲಿ ಒಬ್ಟಾತನು ನಾರಾಯಣಪುರದ ಓರ್ಛಾ ಪ್ರದೇಶದ ನಿವಾಸಿ ನೆಲ್ಲಿರಾಮ್‌ ಎಂದೂ, ಇನ್ನೊಬ್ಬ ದಾಂತೇವಾಡದ ಬರಸೂರ್‌ ಪ್ರದೇವದ ಮುನ್ನಾ ಇಸ್ತಾ (30) ಎಂದೂ ಪೊಲೀಸರು ತಿಳಿಸಿದ್ದಾರೆ.

ಈ ಇಬ್ಬರು ನಕ್ಸಲರು ಮಾವೋವಾದಿಗಳ ಜನಮಿಲಿಶಿಯಾ ಸದಸ್ಯರಾಗಿ ಕ್ರಿಯಾಶೀಲರಾಗಿದ್ದರು. ಇವರು ತಮ್ಮ ಬಳಿ ಇದ್ದ ಒಂದು ಮದ್ದುಗುಂಡು ತುಂಬಿದ ಬಂದೂಕು, ಒಂದು ಟಿಫಿನ್‌ ಬಾಂಬ್‌, ಸ್ಫೋಟಕ ಪುಡಿ,ಮಾವೋವಾದಿ ಕರಪತ್ರಗಳು ಮತ್ತು ಪಟಾಕಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next