Advertisement

Exam scam: ಇನ್ನೆರಡು ಪರೀಕ್ಷಾ ಜಾಲ ಬಹಿರಂಗ ? ಅಶ್ವತ್ಥನಾರಾಯಣ

12:52 AM Nov 08, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ನ ರಾಜಕೀಯ ಬೆಂಬಲ ಪಡೆದು ಆರ್‌.ಡಿ. ಪಾಟೀಲ್‌ ಗ್ಯಾಂಗ್‌ ಅಕ್ರಮ ಪರೀಕ್ಷಾ ಹಗರಣ ನಡೆಸುತ್ತಿದೆ. ಇದೇ ರೀತಿ ಇನ್ನೆರಡು ಪರೀಕ್ಷಾ ಜಾಲಗಳಿದ್ದು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಆರ್‌.ಡಿ. ಪಾಟೀಲ್‌ ಹಾಗೂ ಅವರ ಅಣ್ಣ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವರು. ಜೈಲಿನಿಂದ ಹೊರಗೆ ಬಂದು ಮತ್ತೆ ಅಕ್ರಮ ಮಾಡಿದ್ದಾನೆ. ಈ ಕಾಂಗ್ರೆಸ್‌ ನಾಯಕರಿಗೆ ಮಾನ ಮರ್ಯಾದೆ ಏನೂ ಇಲ್ಲ. ಒಬ್ಬ ದಫೇದಾರ ಡಿವೈಎಸ್ಪಿ ಪ್ರಮೋಷನ್‌ ಪಡೆಯುವ ಮಟ್ಟಕ್ಕೆ ಹೇಗೆ ಬಂದ? ಈ ಪ್ರಕರಣದಲ್ಲಿ ಪಾಟೀಲ್‌ ತನ್ನ ಆಟ ತೋರಿದ್ದಾನೆ. ನ್ಯಾಯ ನೀತಿ ಬಗ್ಗೆ ಕಾಂಗ್ರೆಸ್‌ನವರಿಗೆ ಕಾಳಜಿ ಇಲ್ಲ. ಪಿಎಸ್‌ಐ ಪ್ರಕರಣದಲ್ಲೂ ಕಾಂಗ್ರೆಸ್‌ ಪಾಲಿತ್ತು. ಒಬ್ಬ ಆರೋಪಿ, ಚಾರ್ಜ್‌ ಶೀಟ್‌ ನಲ್ಲಿ ಹೆಸರು ಇರೋನು ಮತ್ತೆ ಅಕ್ರಮ ಮಾಡಿದ್ದಾನೆ. ಇಷ್ಟಿದ್ದ ಮೇಲೆ ಮಾತನಾಡುವುದಕ್ಕೆ ಪ್ರಿಯಾಂಕ್‌ಗೆ ಹೇಗೆ ಬಾಯಿ ಬರುತ್ತದೆ? ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next