Advertisement

ಉಗ್ರರನ್ನು ಮಟ್ಟ ಹಾಕಲು ಪುಲ್ವಾಮದಲ್ಲಿ ಸೇನಾ ಕಾರ್ಯಾಚರಣೆ

07:21 AM Oct 23, 2019 | Team Udayavani |

ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿನ ರಾಜ್ ಪುರ ಭಾಗದಲ್ಲಿ ವಸತಿ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಉಗ್ರರನ್ನು ಮಟ್ಟಹಾಕಲು ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಸುತ್ತುವರೆದಿದೆ ಎಂಬ ಮಾಹಿತಿಯೂ ಇದೀಗ ಲಭಿಸಿದೆ.

Advertisement

ಪೂಂಛ್ ಜಿಲ್ಲೆಯ ಬಾಲಾಕೋಟ್ ಮತ್ತು ಮೆಂದಾರ್ ಭಾಗಗಳಲ್ಲಿ ಪಾಕಿಸ್ಥಾನ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿಯನ್ನು ನಡೆಸಿದ ಬೆನ್ನಲ್ಲೇ ಸೇನೆ ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಈ ಅನಪೆಕ್ಷಿತ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ಥಾನದ ಕಡೆಯಿಂದ ನಡೆಯುತ್ತಿದ್ದ ಗುಂಡಿನ ದಾಳಿ ಇಂದು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ನಿಂತಿತ್ತು.

ಎರಡು ದಿನಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ಆರ್ಟಿಲ್ಲರಿ ಗನ್ ಮೂಲಕ ದಾಳಿ ನಡೆಸಿ ಉಗ್ರ ಶಿಬಿರಗಳನ್ನು ಧ್ವಂಸಗೊಳಿಸಿತ್ತು.

ಉಗ್ರ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next