Advertisement

ಮುಂಬಯಿ ಮಳೆ ಅಬ್ಬರ: ಪ್ರತ್ಯೇಕ ಕಡೆ ಮರ ಬಿದ್ದು ಇಬ್ಬರ ಸಾವು

09:43 AM Jun 18, 2019 | Team Udayavani |

ಮುಂಬಯಿ: ನಗರದಲ್ಲಿ ಮಳೆ ಅಬ್ಬರಿಸುತ್ತಿದ್ದು ಶುಕ್ರವಾರ ನಡೆದ ಪ್ರತ್ಯೇಕ ಅವಘಡಗಳಲ್ಲಿ ಮರದ ಕೊಂಬೆಗಳು ಬಿದ್ದು ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

Advertisement

ಮಲಾಡ್‌ನ‌ ಎಸ್‌ವಿ ರೋಡ್‌ನ‌ ವಿಜಯ್‌ಕರ್‌ ವಾಡಿ ಎಂಬಲ್ಲಿ ಮರ ಬಿದ್ದು 38 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು,ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿ ಶೈಲೇಶ್‌ ಮೋಹನ್‌ ಲಾಲ್‌ ರಾಠೊಡ್‌ ಎನ್ನುವವರಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೋರ್ವ ಗಾಯಾಳುವಿಗೆ ಚಿಕಿತ್ಸೆ ಮುಂದುವರಿದಿದೆ.

ಜೋಗೇಶ್ವರಿಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಅಪಾಯಕಾರಿ ಎನಿಸುವ ಮರಗಳ ತೆರವು ಕಾರ್ಯಾಚರಣೆಯನ್ನು ಬಿಎಂಸಿ ಕೈಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next