Advertisement

ಬಿಸಿಲ ಬೇಗೆಗೆ ಇಬ್ಬರು ಬಲಿ?

11:20 AM Mar 25, 2019 | Team Udayavani |

ತಿರುವನಂತಪುರ: ಸುಡು ಬಿಸಿಲಿನಿಂದ ಉಂಟಾಗುವ ಸನ್‌ ಬರ್ನ್ಗಳ ಪರಿಣಾಮ ಕೇರಳದ ಪರಸ್ಸಾಲ ಹಾಗೂ ಕಣ್ಣೂರಿನಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಈ ಇಬ್ಬರ ದೇಹದ ಮೇಲೆ ಸನ್‌ ಬರ್ನ್ ಗುರುತುಗಳು ಇವೆಯಾದರೂ, ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯಿಂದ ಮಾತ್ರ ತಿಳಿದುಬರಲಿದೆ.

Advertisement

ಎರಡು ದಿನಗಳ ಹಿಂದಷ್ಟೇ, ತಿರುವನಂತಪುರ, ಕೊಲ್ಲಂ, ಪಟ್ಟಣಂತಿಟ್ಟ, ಅಳಪ್ಪುಳ, ಎರ್ನಾಕುಲಂ, ಪಾಲಕ್ಕಾಡ್‌ ಹಾಗೂ ಕಣ್ಣೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಮಾ. 26ರವರೆಗೆ ಬಿಸಿಲಿನ ತಾಪಮಾನ ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಜಾಸ್ತಿ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next