Advertisement

ಇರಾನ್‌ನ ಹಡಗಿನಲ್ಲಿ ಬಂಧಿಯಾಗಿದ್ದ ಭಾರತೀಯರು ವಾಪಸ್‌

09:25 PM Feb 12, 2022 | Team Udayavani |

ಮುಂಬೈ: ಪಾಸ್‌ಪೋರ್ಟ್‌ ಇಲ್ಲದ ಕಾರಣ, 2019ರಿಂದ ಇರಾನ್‌ನ ಸರಕು ಸಾಗಾಟ ಹಡಗಿನಲ್ಲೇ ಬಂಧಿಯಾಗಿದ್ದ ಭಾರತೀಯ ಯುವಕರಿಬ್ಬರು ಶನಿವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

Advertisement

ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಆ ಯುವಕರಿಗೆ ಪ್ರಯಾಣ ದಾಖಲೆಗಳನ್ನು ಕೊಟ್ಟಿದ್ದರಿಂದ ಅವರು ತಾಯ್ನಾಡಿಗೆ ಮರಳುವಂತಾಗಿದೆ.

ಅರ್ಹಾಮ್‌ ಶೇಖ್‌ ಮತ್ತು ಆಶಿಶ್‌ ಸಕ್ಬಾಲ್‌  2019ರಲ್ಲಿ ಪ್ರವಾಸಿ ವೀಸಾದಲ್ಲಿ ಇರಾನ್‌ಗೆ ತೆರಳಿ ಅಲ್ಲಿನ ಸರಕು ಹಡಗಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಅವರ ವೀಸಾವನ್ನು ವಶಕ್ಕೆ ಪಡೆದಿದ್ದ ಹಡಗಿನ ಅಧಿಕಾರಿಗಳು ನಂತರ ಅದನ್ನು ಕಳೆದುಹಾಕಿದ್ದರು. ಭಾರತದಲ್ಲಿರುವ ಯುವಕರ ಕುಟುಂಬ ಈ ವಿಚಾರವಾಗಿ ಭಾರತದ ಸಾಗರ ಒಕ್ಕೂಟ(ಎಂಯುಐ) ಬಳಿ ಸಹಾಯ ಕೇಳಿದ್ದು, ಅದು ಈಗ ಫ‌ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next