Advertisement

ಸಾಲ ಬಾಧೆ: ಇಬ್ಬರು ರೈತರು ನೇಣಿಗೆ ಶರಣು

09:21 PM Jun 16, 2020 | Hari Prasad |

ಬೀದರ: ಸಾಲ ಬಾಧೆ ತಾಳದೇ ಇಬ್ಬರು ರೈತರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿವೆ.

Advertisement

ಭಾಲ್ಕಿ ತಾಲೂಕಿನ ಭಗವಾನ ವಾಡಿಯ ಲಕ್ಷ್ಮಣ ಬಿರಾದಾರ (45) ಮತ್ತು ಬಸವಕಲ್ಯಾಣ ತಾಲೂಕಿನ ಚಂಡಕಾಪೂರ ಗ್ರಾಮದ ಮಾಧವರಾವ ಜಾಧವ (47) ಆತ್ಮಹತ್ಯೆಗೆ ಶರಣಾಗಿರುವ ನತದೃಷ್ಟರಾಗಿದ್ದಾರೆ.

ರೈತ ಮಾಧವ ರಾವ್ ಕೃಷಿ ಚಟುವಟಿಕೆಗಾಗಿ ಸಿಂಟಿಕೇಟ್ ಬ್ಯಾಂಕ್‌ನಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದರು, ಲಕ್ಷ್ಮಣ ಸಹ ಒಕ್ಕಲುತನ ಕೆಲಸಕ್ಕಾಗಿ ಸಾಲ ಮಾಡಿದ್ದರು.

ವಿಭಿನ್ನ ಸನ್ನಿವೇಶಗಳಲ್ಲಿ ಇವರಿಬ್ಬರೂ ಸಾಲ ತಿರಿಸಲಾಗದೆ ಸೋಮವಾರ ತಮ್ಮ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ಮತ್ತು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next