Advertisement

ರಕ್ಷಿತಾರಣ್ಯದ ಮರ ಕಡಿತ: ಇಬ್ಬರು ವಶಕ್ಕೆ

08:00 PM Aug 25, 2022 | Team Udayavani |

ಉಪ್ಪಿನಂಗಡಿ: ಸರಕಾರಿ ರಕ್ಷಿತಾರಣ್ಯದ ಮರವನ್ನು ಕಡಿದು ಅಲ್ಲೆ ಸಾಮಗ್ರಿಗಳನ್ನು ತಯಾರಿಸಿ ಒಯ್ಯಲು ಸಿದ್ಧತೆ ನಡೆಸಿದ್ದ ಇಬ್ಬರನ್ನು ಬೆಲೆ ಬಾಳುವ ಮರದ ದಿಮ್ಮಿ ಸಹಿತ ವಶಕ್ಕೆ ಪಡೆಯಲಾಗಿದೆ.

Advertisement

ಪದ್ಮುಂಜ ನಿವಾಸಿಗಳಾದ ದಿನೇಶ, ಉಮೇಶ ಮತ್ತು ಹೇಮಂತ್‌ ಬಂಧಿತರು. ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮಲೆಂಗಲ್ಲು ಮೀಸಲು ಅರಣ್ಯದಲ್ಲಿ ಬಾರಿ ಗಾತ್ರದ ಕಲಾºಜಿ ಮರವನ್ನು ಕಡಿಯುತ್ತಿದ್ದ ಖಚಿತ ವರ್ತಮಾನದೊಂದಿಗೆ ಉಪರಣ್ಯಾಧಿಕಾರಿ ಬಿ. ಜೆರಾಲ್ಡ್‌ ಡಿ’ಸೋಜಾ, ಅರಣ್ಯ ರಕ್ಷಕ ಜಗದೀಶ ಕೆ.ಎನ್‌., ಎಂ.ಎಂ. ಜಗದೀಶ, ಅರಣ್ಯ ವೀಕ್ಷಕ ರವಿ ಬಿ. ಸೇಸಪ್ಪ ಗೌಡ ಅವರು ಕಾರ್ಯಾಚರಣೆ ನಡೆಸಿದ್ದಾರೆ.

ಮರಮಟ್ಟು ಸಹಿತ ಮರ ಕಡಿಯಲು ಉಪಯೋಗಿಸಿದ್ದ ವಿದ್ಯುತ್‌ ಯಂತ್ರವನ್ನು ವಶಪಡಿಸಿಕೊಂಡಿದ್ದು, ಅದರ ಒಟ್ಟು ಮೌಲ್ಯ 40 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ವಲಯಾಧಿಕಾರಿ ಮಧೂಸೂದನ್‌ ಎ. ಅವರು ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next