Advertisement

ಎರಡು ದಿನ “ರೆಡ್‌ ಅಲರ್ಟ್‌’: ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆ

02:51 AM Jul 09, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಶುಕ್ರವಾರ ತುಸು ತಗ್ಗಿತ್ತು. ಮುನ್ನೆಚ್ಚರಿಕೆ ದೃಷ್ಟಿಯಿಂದ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಶನಿವಾರವೂ ರಜೆ ಮುಂದುವರಿಯಲಿದೆ.

Advertisement

ಮಂಗಳೂರು ನಗರದಲ್ಲಿ ಬೆಳಗ್ಗಿನಿಂದಲೇ ಸುರಿದ ಉತ್ತಮ ಮಳೆ ಮಧ್ಯಾಹ್ನದಿಂದ ಸಂಜೆಯವರೆಗೆ ತುಸು ಬಿಡುವು ನೀಡಿದೆ. ದೇರೆಬೈಲ್‌ನ ಬೋರುಗುಡ್ಡೆಯಲ್ಲಿ ಭೂಕುಸಿತ ವಾಗಿ ಗುಡ್ಡದಲ್ಲಿರುವ ಕೆಲವು ಮನೆಗಳು ಸದ್ಯ ಆತಂಕ ಎದುರಿಸುತ್ತಿವೆ. ಬೋರುಗುಡ್ಡೆಯಲ್ಲಿ ಸುಮಾರು 60 ಮನೆಗಳಿದ್ದು, ಈ ಪೈಕಿ ಗುಡ್ಡದ ಬದಿಯಲ್ಲಿ ಸುಮಾರು 10 ಮನೆಗಳಿವೆ.

ಬೆಳ್ತಂಗಡಿ ನೆರಿಯದಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ, ಮುಂಡಾಜೆಯಲ್ಲಿ ಮನೆಗೆ ಹಾನಿಯಾಗಿದೆ.

ಎರಡು ದಿನ “ರೆಡ್‌ ಅಲರ್ಟ್‌’
ಕರಾವಳಿ ಭಾಗದಲ್ಲಿ ಭಾರೀ ಮಳೆಯಾ ಗುವ ನಿರೀಕ್ಷೆ ಇದ್ದು, ಜು. 9ರಂದು ಬೆಳಗ್ಗೆ 8.30ರಿಂದ ಜು. 10ರ ಬೆಳಗ್ಗೆ 8.30ರ ವರೆಗೆ “ರೆಡ್‌ ಅಲರ್ಟ್‌’ ಘೋಷಿಸಲಾಗಿದೆ.

ವಿಮಾನ ಪಥ ಬದಲು
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಇಳಿಯಬೇಕಾಗಿದ್ದ ದುಬಾೖ -ಮಂಗಳೂರು ಸ್ಪೈಸ್‌ ಜೆಟ್‌ ವಿಮಾನವನ್ನು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಕೊಚ್ಚಿನ್‌ಗೆ ತಿರುಗಿಸಲಾಯಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next