Advertisement

ಗೋಕರ್ಣದಲ್ಲಿ ಇಬ್ಬರು ಬಾಲಕರು ಸಮುದ್ರ ಪಾಲು

09:41 PM Sep 17, 2020 | mahesh |

ಕಾರವಾರ : ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಕಡಲ ಪಾಲಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.

Advertisement

ಮೈಸೂರಿನ ಅತ್ತಿಹಳ್ಳಿ ಸುಹಾಸ್(17) ಮೃತ ಬಾಲಕ. ಈತನ ಜೊತೆಗಿದ್ದ ಮೈಸೂರು ,ಅತ್ತಿಹಳ್ಳಿ ನಿವಾಸಿ ಮೂಲದ ಉಲ್ಲಾಸ್ (15) ಸಮುದ್ರದಲ್ಲಿ ಕಾಣಿಯಾದ ಬಾಲಕನಾಗಿದ್ದಾನೆ.

ಎಂಟು ಜನರ ತಂಡ ಮೈಸೂರಿನಿಂದ ಪ್ರವಾಸಕ್ಕೆ ಬಂದಿದ್ದರು. ಸೆ.16 ರಂದು ಗೋಕರ್ಣಕ್ಕೆ ಬಂದು, ಗೋಕರ್ಣ ರೆಸಾರ್ಟನಲ್ಲಿ ಉಳಿದುಕೊಂಡಿದ್ದರು. ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸಮುದ್ರಕ್ಕಿಳಿದಿದ್ದರು. ಇಂದು ಮಹಾಲಯ ಅಮವಾಸ್ಯೆ ಆದ್ದರಿಂದ ಸಮುದ್ರದಲ್ಲಿ ಸೆಳತ ಹೆಚ್ಚುರುತ್ತದೆ. ಹಾಗಾಗಿ ಸಮುದ್ರದಲ್ಲಿ ಇಳಿಯಬೇಡಿ ಎಂದು ಇವರನ್ನು ಎಚ್ಚರಿಸಲಾಗಿತ್ತು. ಆದರೂ ಈ ಪ್ರವಾಸಿಗರು ಅಕ್ಕಪಕ್ಕದವರ ಮಾತಿಗೆ ಬೆಲೆ ಕೊಡದೇ ಸಮುದ್ರಕ್ಕಿಳಿದಿದ್ದರು. ಈವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. ಹಾಗೂ ಅಲೆಗಳ. ಸೆಳೆತ , ಅಬ್ಬರ ರಭಸ ಹೆಚ್ಚಿ, ಅಲೆಯಲ್ಲಿ ಇಬ್ಬರು ಬಾಲಕರು ಸಿಕ್ಕಿಹಾಕಿಕೊಂಡರು ಎನ್ನಲಾಗಿದೆ.

ಇವರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ, ಸುಹಾಸ್ ಎಂಬ ಬಾಲಕ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲಿ ಕೊನೆಯುಸಿರೆಳೆದ . ಇನ್ನೋರ್ವ ಬಾಲಕ ಸಮುದ್ರದ ಅಲೆಗೆ ಕಾಣೆಯಾದ . ಈತನ ಶವಕ್ಕಾಗಿ ಹುಡುಕಾಟ ನಡೆಸಲಾಗಿದೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next