Advertisement

ಮಂಗಳೂರು: ಈಜಲು ತೆರಳಿದ್ದ  ಬಾಲಕರಿಬ್ಬರು ನದಿಪಾಲು

11:38 AM May 30, 2017 | Team Udayavani |

 ಮಂಗಳೂರು: ಈಜಲೆಂದು ನದಿಗಿಳಿದ ಬಾಲಕರಿಬ್ಬರು ನೀರುಪಾಲಾದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿ ಮಂಗಳವಾರ  ಬೆಳಗ್ಗೆ ನಡೆದಿದೆ. 

Advertisement

ನೀರುಪಾಲಾದ ಬಾಲಕರನ್ನು ಪುದು ಗ್ರಾಮದ ಲಿಖಿತ್ ರಾಜ್(16) ಹಾಗೂ ಯಜ್ಞೇಶ್(17) ಎಂದು ಗುರುತಿಸಲಾಗಿದೆ. ಅಡ್ಯಾರ್‌ನಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಈಜಲೆಂದು ತೆರಳಿದ್ದರು.ಈ ವೇಳೆ ದುರಂತ ಸಂಭವಿಸಿದೆ.

ಹುಡುಕಾಟದ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next