Advertisement

ಐಪಿಎಲ್‌ ವಿರೋಧಿ ಪ್ರತಿಭಟನೆ ಇಬ್ಬರ ಬಂಧನ

07:00 AM Apr 11, 2018 | |

ಚೆನ್ನೈ: ತಮಿಳು ಪರ ಸಂಘಟನೆಗಳಿಂದ ಚೆನ್ನೈಯಲ್ಲಿ ಮಂಗಳವಾರ ಐಪಿಎಲ್‌ ವಿರೋಧಿ ಪ್ರತಿಭಟನೆ ತೀವ್ರವಾಗಿ ನಡೆದಿದೆ. ಸಿನಿಮಾ ನಿರ್ದೇಶಕರ ಸಹಿತ ನೂರಾರು ಮಂದಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಮಂಗಳವಾರ ಚೆನ್ನೈ ಮತ್ತು ಕೋಲ್ಕತಾ ನಡುವಣ ಐಪಿಎಲ್‌ ಪಂದ್ಯದ ತಾಣವಾದ ಎಂ.ಎ. ಚಿದಂಬರಂ ಕ್ರೀಂಡಾಂಗಣಕ್ಕೆ ಚಪ್ಪಲಿ ಎಸೆದ ಇಬ್ಬರನ್ನು ಬಂಧಿಸಲಾಗಿದೆ. ಕೆಲವು ಕಡೆ ಪ್ರತಿಭಟನಾಕಾರರನ್ನು ಓಡಿಸಲು ಪೊಲೀಸರು ಪ್ರಯತ್ನಿಸಿದರು.

Advertisement

ಪ್ರತಿಭಟನಾಕಾರರು ಚೆನ್ನೈ ತಂಡದ ಹಳದಿ ಜರ್ಸಿಯನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಮಿಳು ಪರ ಬಣಗಳಾದ ತಮಿಂಝಂಗ ವಾಜ್ವರಿಮಯ್‌ ಕಾಟಿj ಮತ್ತು ಹೊಸದಾಗಿ ಸ್ಥಾಪಿಸಲಾದ ತಮಿಳು ನಿರ್ದೇಶಕ ಪಡೆ ಐಪಿಎಲ್‌ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿವೆ. ಕಾವೇರಿ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಯ ಗಮನವನ್ನು ತಪ್ಪಿಸಲು ಐಪಿಎಲ್‌ ಅನ್ನು ಸಂಘಟಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಚೆನ್ನೈ ಮತ್ತು ಕೋಲ್ಕತಾ ನಡುವಣ ಪಂದ್ಯದ ಎಂಟನೇ ಓವರ್‌ ವೇಳೆ ಮೈದಾನಕ್ಕೆ ಚಪ್ಪಲಿ ಎಸೆದ ಘಟನೆ ನಡೆದಿದೆ. ಚೆನ್ನೈ ಫೀಲ್ಡರ್‌ ರವೀಂದ್ರ ಜಡೇಜ ಬಳಿ ಚಪ್ಪಲಿ ಬಿದ್ದಿದೆ. 

Advertisement

Udayavani is now on Telegram. Click here to join our channel and stay updated with the latest news.

Next