Advertisement

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ : ರೈತರ ಮೊಗದಲ್ಲಿ‌ ಮಂದಹಾಸ

10:28 PM May 20, 2022 | Team Udayavani |

ಹೊಸಪೇಟೆ: ಕರ್ನಾಟಕ, ಆಂಧ್ರ, ತೆಲಂಗಾಣ‌ ರಾಜ್ಯಗಳ‌ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ‌ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಶುಕ್ರವಾರ 36273 ಕ್ಯೂಸೆಕ್ಸ್ ನೀರು‌ ಜಲಾಶಯಕ್ಕೆ ಹರಿದು ಬಂದಿದೆ.

Advertisement

ಕಳೆದ ನಾಲ್ಕು ದಿನಗಳಿಂದ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ‌ ನಿರಂತರ ಮಳೆಯಿಂದ ಜಲಾಶಯಕ್ಕೆ ಆಧಿಕ ಪ್ರಮಾಣದಲ್ಲಿ ನೀರು ಹರಿದು‌ ಬರುತ್ತಿದ್ದು, ಒಂದೇ ದಿನ 1.390 ಟಿಎಂಸಿ‌‌ ನೀರು ಸಂಗ್ರಹವಾಗಿದೆ.

ಗುರುವಾರದ‌ ನೀರಿನ‌ ವರದಿ ಪ್ರಕಾರ ಜಲಾಶಯದ ನೀರಿನ‌ ಮಟ್ಟ 1593.96 ಅಡಿಗಳು ಇತ್ತು. ಶುಕ್ರವಾರ 1595.32 ಅಡಿಯಷ್ಟು ನೀರು ಹೆಚ್ಚಳವಾಗಿದೆ.

ಪ್ರಸ್ತುತ ಜಲಾಶಯದಲ್ಲಿ 14.504 ಟಿಎಂಸಿ ಸಂಗ್ರಹವಿದೆ.

ಇದನ್ನೂ ಓದಿ : ವಿದ್ಯುತ್ ವ್ಯತ್ಯಯ :ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

Advertisement

Advertisement

Udayavani is now on Telegram. Click here to join our channel and stay updated with the latest news.

Next