Advertisement

ಕೌಟುಂಬಿಕ ಕಲಹ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ನವದಂಪತಿಗಳು

07:18 PM Nov 20, 2021 | Team Udayavani |

ಕುಣಿಗಲ್: ಕೌಟುಂಬಿಕ ಕಲಹದಿಂದ ಹೆಂಡತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ ಗಂಡನೂ ವಿಷ ಕುಡಿದು ಜೊತೆಗೆ ನೇಣು ಹಾಕಿಕೊಂಡು ಇಬ್ಬರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ.

Advertisement

ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಕೆಂಪಸಾಗರ ಗ್ರಾಮದ ವಾಸಿ ಮುನಿರಾಜು(26) ಹಾಗೂ ಈಕೆಯ ಪತ್ನಿ ವರಲಕ್ಷ್ಮಿ(22) ನೇಣಿಗೆ ಶರಣಾಗಿರುವ ನವ ದಂಪತಿಗಳು. ಮುನಿರಾಜು ಅವರಿಗೆ ಹತ್ತಿರದ ಸಂಬದದ ಕೆಂಪಸಾಗರ ಗ್ರಾಮದ ವರಲಕ್ಷ್ಮಿಯನ್ನು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಾರು. ಶನಿವಾರ ಬೆಳಗ್ಗೆ ಪತ್ನಿ ವರಲಕ್ಷ್ಮೀ ತಮ್ಮ ತಾಯಿ ಮನೆಗೆ ಹೋಗಿದ್ದರು ತಾಯಿ ಮನೆಗೆ ಹೋದ ಗಂಡ ಮುನಿರಾಜು ತಿಂಡಿ ಮಾಡಿಕೊಡಲು ಮನೆಗೆ ಬಾ ಎಂದು ಕೆರೆದು ಬಂದಿದ್ದಾರೆ. ನಂತರ ಕುಣಿಗಲ್‍ನಲ್ಲಿ ಮುನಿರಾಜು ಚಿಲ್ಲರೇ ಆಂಗಡಿ ಇಟ್ಟುಕೊಂಡಿದ್ದರು. ಹೆಂಡತಿ ಬಾರದಿದ್ದಾಗ ಅಂಗಡಿ ತೆಗೆಯಲು ಮುನಿರಾಜು ಕುಣಿಗಲ್‍ಗೆ ಬಂದಿದ್ದಾರೆ. ಇನ್ನೂ ಮುನಿರಾಜು ಅವರ ತಂದೆ ತಾಯಿ ಜಾನುವಾರುಗಳನ್ನು ಮೇಯಿಸಲು ಹಾಗೂ ಜಮೀನು ಕೆಲಸಕ್ಕೆ ಹೊರಗೆ ಹೋಗಿದ್ದಾರೆ. ಈ ವೇಳೆಗೆ ಮನೆಗೆ ಬಂದ ವರಲಕ್ಷ್ಮಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಮುನಿರಾಜು ತಂದೆ ತಾಯಿ ಮಧ್ಯಾಹ್ನ ಮನೆಗೆ ಬಂದಾಗ ವರಲಕ್ಷ್ಮಿ ನೇಣು ಹಾಕಿಕೊಂಡಿರುವ ವಿಷಯ ತಿಳಿದಿದೆ. ಈ ವಿಷಯವನ್ನು ಗ್ರಾಮಸ್ಥರು ಮುನಿರಾಜುಗೆ ತಿಳಿಸಿದ್ದಾರೆ. ಇದರಿಂದ ಶಾಕ್ ಆದ ಮುನಿರಾಜು ಕುಣಿಗಲ್‍ನಲ್ಲೇ ವಿಷ ಕುಡಿದು ಕೆಂಪಸಾಗರ ಗ್ರಾಮಕ್ಕೆ ತೆರಳಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮಸ್ಥರು ಇಬ್ಬರ ಶವಗಳನ್ನು ಕುಣಿಗಲ್ ಶವಾಗಾರಕ್ಕೆ ಸಾಗಿಸಿದ್ದಾರೆ. ಕುಣಿಗಲ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಕುಲ್ಗಾಮ್‌:ಹಿಜ್ಬುಲ್ ಪ್ರಮುಖ ಕಮಾಂಡರ್ ಹತ್ಯೆ;ಮುಂದುವರಿದ ಎನ್‌ಕೌಂಟರ್

Advertisement

Udayavani is now on Telegram. Click here to join our channel and stay updated with the latest news.

Next