Advertisement

Kunigal:ಉತ್ಸವದ ವೇಳೆ ಅಗ್ನಿಕೊಂಡದಲ್ಲಿ ಬಿದ್ದು ಓರ್ವನಿಗೆ ಗಾಯ

08:41 AM Apr 03, 2024 | Team Udayavani |

ಕುಣಿಗಲ್ : ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಅಗ್ನಿಕೊಂಡ ಹಾಯುವ ವೇಳೆ ಆಯ ತಪ್ಪಿ ದೇವರ ಮೂರ್ತಿ ಸಮೇತ ಭಕ್ತನೋರ್ವನ್ನು ಕೊಂಡದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹುಲಿಕಟ್ಟೆ ಗ್ರಾಮದಲ್ಲಿ ಬುಧವಾರ ನಡೆದಿದೆ.

Advertisement

ಹುಲಿಕಟ್ಟೆ ಗ್ರಾಮದ ರವಿ( 30) ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡ ವ್ಯಕ್ತಿ. ಮಂಗಳವಾರ ಮಾರಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಹುಲಿಕಟ್ಟರ ಗ್ರಾಮದಲ್ಲಿ ದೇವರಿಗೆ ಆರತಿ, ದೇವರ ಮೆರವಣಿಗೆ ಕಾರ್ಯಕ್ರಮಗಳು ವಿರ್ಜಭಣೆಯಿಂದ ನಡೆಯಿತು. ರಾತ್ರಿ ಅಗ್ನಿಕೊಂಡ ಏರ್ಪಡಿಸಲಾಗಿತ್ತು, ಬುಧವಾರ ಬೆಳಗಿನ ಜಾವ ಗ್ರಾಮದ ರವಿ ದೇವರ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಅಗ್ನಿಕೊಂಡದಲ್ಲಿ ಹೊಗುತ್ತಿದ್ದ ವೇಳೆ, ಆಯ ತಪ್ಪಿ ಅಗ್ನಿಕೊಂಡದ ಒಳಗೆ ಬಿದ್ದು ಗಾಯಗೊಂಡಿದ್ದಾರೆ.

ಸ್ಥಳದಲ್ಲೇ ಇದ್ದ ಭಕ್ತಾಧಿಗಳು ರಕ್ಷಿಸಿ, ಗಾಯಗೊಂಡ ವ್ಯಕ್ತಿಗಳನ್ನು ಕುಣಿಗಲ್ ಪಟ್ಟಣದ ಎಂ.ಎಂ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next