Advertisement

Tumakuru; ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು

11:19 PM Jan 06, 2024 | Team Udayavani |

ತುಮಕೂರು: ಗ್ರಾಮಾಂತರ ಠಾಣೆ ಹೆಡ್‌ಕಾನ್ಸ್‌ ಟೇಬಲ್‌ ಮೇಲೆ ಮಚ್ಚು ಬೀಸಿರುವ ರೌಡಿಶೀಟರ್‌ ವಿರುದ್ಧ ಪೊಲೀಸರು ಫೈರಿಂಗ್‌ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ಒಕ್ಕೋಡಿ ಬಳಿ ನಡೆದಿದೆ.

Advertisement

ಮನೋಜ್‌ ಅಲಿಯಾಸ್‌ ಮಂಡೇಲಾನ ಮಚ್ಚು ಬೀಸಿ, ಗುಂಡೇಟು ತಿಂದ ರೌಡಿ. ಬಂಧನಕ್ಕೆ ತೆರಳಿದ ವೇಳೆ ಹೆಡ್‌ ಕಾನ್‌ ಸ್ಟೇಬಲ್‌ ಮೇಲೆ ರೌಡಿಶೀಟರ್‌ ಮಚ್ಚು ಬೀಸಿದ್ದು, ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಶನಿವಾರ ಬೆಳಗ್ಗೆ ಬಂಡೆ ನಾಗನ ಮೇಲೆ ರೌಡಿಶೀಟರ್‌ ಮನೋಜಾ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ್ದ. ಬಂಡೆನಾಗ ತಪ್ಪಸಿಕೊಂಡು ಜೀವ ಉಳಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಕುರಿತು ಪೊಲೀಸರು ಮನೋಜ್‌ಗಾಗಿ ಹುಡುಕಾಟ ನಡೆಸಿದ್ದರು.

ರೌಡಿಶೀಟರ್‌ ಮನೋಜ್‌ ಫೋನ್‌ಕಾಲ್‌ ನೆಟ್‌ವರ್ಕ್‌ ಆಧಾರದ ಮೇಲೆ ಹೆಗ್ಗರೆ ಬಳಿಯ ಒಕ್ಕೋಡಿಯಲ್ಲಿ ತಲೆ ಮರೆಸಿಕೊಂಡಿರುವುದು ಗೊತ್ತಾಗಿದೆ. ತಕ್ಷಣವೇ ಮನೋಜ್‌ ಬಂಧನಕ್ಕೆ ತೆರಳಿದ್ದ ವೇಳೆ ಹೆಡ್‌ ಕಾನ್‌ ಸ್ಟೇಬಲ್‌ ಮೇಲೆ ಮನೋಜ್‌ ಮಚ್ಚು ಬೀಸಿದ್ದು, ಹೆಡ್‌ ಕಾನ್‌ ಸ್ಟೇಬಲ್‌ ಗೆ ಕೈಗೆ ಗಾಯಗಳಾಗಿವೆ. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪೊಲೀಸರು ಮನೋಜ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಮನೋಜ್‌ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಗಾಯಗೊಂಡ ಹೆಡ್‌ ಕಾನ್‌ ಸ್ಟೇಬಲ್‌ ಗೂ ಚಿಕಿತ್ಸೆ ನೀಡಲಾಗುತ್ತಿದೆ.

ರೌಡಿಶೀಟರ್‌ಗೆ ಗುಂಡೇಟು
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಎಸ್ಪಿ ಕೆ.ವಿ.ಅಶೋಕ್‌ ಮಾತನಾಡಿ, ರೌಡಿಶೀಟರ್‌ ಮನೋಜ್‌ ಎಂಬುವರ ಕಾಲಿಗೆ ಗುಂಡೇಟು ಹಾರಿಸಲಾಗಿದೆ. ಬಂಡೆ ನಾಗನ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ದಾಳಿ ನಡೆಸಿ ಮನೋಜ್‌ ಮತ್ತು ಇತರರನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ನಗರ ಠಾಣೆಯ ಎಎಸ್‌ಐ ಮಲ್ಲೇಶ್‌, ಹೆಡ್‌ ಕಾನ್‌ ಸ್ಟೇಬಲ್‌ ಮಹ್ಮದ್‌ ನಯಾಜ್‌ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೆಡ್‌ ಕಾನ್‌ ಸ್ಟೇಬಲ್‌ ಮಹ್ಮದ್‌ ನಯಾಜ್‌ಗೆ ಗಾಯವಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪೊಲೀಸರು ಸೂಚನೆ ನೀಡಿದರೂ ಶರಣಾಗತಿಗೆ ಒಪ್ಪದಿದ್ದಾಗ ಮನೋಜ್‌ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next