Advertisement

ತುಳುನಾಡ ಉತ್ಸವ, ತೌಳವ ಶ್ರೀ ಪ್ರಶಸ್ತಿ ಪ್ರದಾನ

12:52 PM Nov 20, 2017 | |

ಬೆಂಗಳೂರು: ತುಳುಕೂಟ ಬೆಂಗಳೂರು ವತಿಯಿಮದ ಡಿ.17 ರಂದು ನಗರದಲ್ಲಿ “ತುಳುನಾಡ ಉತ್ಸವ-2017′, “ತೌಳವ ಶ್ರೀ’ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ತುಳು ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ.ರಾಜೇಂದ್ರ ಕುಮಾರ್‌ ಮಾಹಿತಿ ನೀಡಿ,ಇದು ಒಂದು ದಿನದ ಸುಗ್ಗಿಯ ಸಂಭ್ರಮವಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ವಿಜಯನಗರದ ಬಂಟರ ಸಂಘದ ಆವರಣದಲ್ಲಿ ನಡೆಯಲಿದೆ. ಈ ವೇಳೆ ತುಳು ಸಾಹಿತ್ಯಗೋಷ್ಠಿ, ಯಕ್ಷಗಾನ, ತಾಳಮದ್ದಲೆ, ಹುಲಿವೇಷ ಕುಣಿತ, ಕರಾವಳಿ ಜಾನಪದ, ಗ್ರಾಮೀಣ ಕ್ರೀಡೆಗಳು ಅನಾವರಣಗೊಳ್ಳಲಿವೆ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರಿ, ಕಾನೂನು ಕ್ಷೇತ್ರದಲ್ಲಿನ ಸಾಧನೆಗಾಗಿ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗಡೆ, ಸಿನಿಮಾ ಮತ್ತು ಸಂಗೀತ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್‌, ಕ್ರೀಡಾ ಕ್ಷೇತ್ರದ ಅಪ್ರತಿಮ ಸಾಧನೆಗಾಗಿ ಮಮತಾ ಪೂಜಾರಿ, ಹೊರನಾಡ ತುಳುವ, ಸರ್ವೋತ್ತಮ ಶೆಟ್ಟಿ (ಅಬುದಾಬಿ) ಅವರಿಗೆ ಈ ಸಾಲಿನ ತೌಳವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು. 

ತುಳುಕೂಟದ ಬೆಂಗಳೂರು ಅಧ್ಯಕ್ಷ ಕೆ.ಜಯರಾಮ ಸೂಡ, ಪ್ರತ್ಯೇಕ ಸಭಾಂಗಣದಲ್ಲಿ ತುಳು ಸಾಹಿತ್ಯ ಸಮ್ಮೇನ ನಡೆಯಲಿದ್ದು, ಸಾಹಿತಿ ಡಾ.ಚಿನ್ನಪ್ಪಗೌಡ, ಡಾ.ಎ.ವಿ.ನಾವುಡ, ಗಣಪತಿ ಎಕ್ಕಾರು, ವಾಸುದೇವ ರಂಗಭಟ್‌ ಸೇರಿದಂತೆ ಹಲವರು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆಂದರು. 

 ಉತ್ಸವದಲ್ಲಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕನ ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸುವಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

Advertisement

ಗುರುಕಿರಣ ತಂಡದಿಂದ ಕಾರ್ಯಕ್ರಮ: ಸಂಜೆ ಕುದ್ರೋಳಿ ಗಣೇಶ್‌ರಿಂದ “ಮ್ಯಾಜಿಕ್‌ ಶೋ’ ಪ್ರಸನ್ನ ಶೆಟ್ಟಿ ಮತ್ತವರ ತಂಡದಿಂದ “ಯಕ್ಷಗಾನ’ ಕದ್ರಿ ನವನೀತ್‌ ಶೆಟ್ಟಿ ಅವರಿಂದ “ತಾಳ ಮದ್ದಳೆ’ ಗುರುಕಿರಣ್‌, ಶಿವಧ್ವಜ ತಂಡದಿಂದ “ತುಳುವೆರೆ ಪಟ್ಟಾಂಗ’ ಸೇರಿ ಹಲವು ಮನರಂಜನೆ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತುಳು ಕವಿತಾ ಸ್ಪರ್ಧೆ: ಇದೇ ವೇಳೆ ತುಳುನಾಡಿನ ಪ್ರತಿಭೆ ಪ್ರೋತ್ಸಾಹಿಸಲು ಪಂಥ ಮತ್ತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ತುಳು ಬುಲೆಚ್ಚಿಲ್‌, ಸಂವಿಧಾನ 8ನೆಯ ಪರಿಚ್ಛೇದ: ತುಳು, ತುಳು ಸಾಂಸ್ಕೃತಿಕ ಜೀವನ ಎಂಬ ವಿಷಯದ ಮೇಲೆ ಪ್ರಬಂಧವನ್ನು ಆಹ್ವಾನಿಸಲಾಗಿದೆ.

ಅಲ್ಲದೆ 250-300 ಶಬ್ದಗಳ ತುಳು ಕವಿತೆ. 300 ಶಬ್ದಗಳ ಒಗಟು ಮತ್ತು ಅದರ ಒಳಕತೆಗಳನ್ನೂ ಆಹ್ವಾನಿಸಿದೆ. ಆಸಕ್ತರು ಮೊ.9341212789 ಕ್ಕೆ ಸಂಪರ್ಕಿಸಬಹುದು. ವಿಜೇತರಿಗೆ 15 ಸಾವಿರ ಪ್ರಥಮ, 10 ಸಾವಿರ ದ್ವೀತಿಯ, 5 ಸಾವಿರ ತೃತೀಯ ಬಹುಮಾನ ನೀಡಲಾಗುವುದು ಎಂದು ಸೂಡ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next