Advertisement
ಎಲ್ಲಾ ಕ್ಷೇತ್ರದ ಹಿರಿಯರ ಸಮಾವೇಶದಲ್ಲಿ ಅವರ ಅನುಭವಸಾರವನ್ನು ಕ್ರೋಢೀಕರಿಸಿ ಮಕ್ಕಳಿಗೆ ಉಪಯುಕ್ತವಾಗಬಲ್ಲ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಎಂಜಿನಿಯರಿಂಗ್ ಕ್ಷೇತ್ರದ ಅಧ್ಯಯನಕ್ಕೆ ಬೇಕಾಗುವ ಪೂರಕ ಮಾಹಿತಿ ನೀಡಲು ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ವರ್ಗ ಸಿದ್ಧವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳು ಶಿವಳ್ಳಿ ಸಭಾ ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ ಮಾತನಾಡಿ, ಬ್ರಾಹ್ಮಣ ಸಮಾಜ ಕೇವಲ ವೈದಿಕದಲ್ಲಿ ಮಾತ್ರವಲ್ಲದೆ ಮಹಿಳೆಯರ ಸಾಧನೆ, ವಿದ್ಯಾರ್ಥಿಗಳ ಪ್ರತಿಭೆಯಿಂದಲೂ ಶ್ರೇಷ್ಠತೆ ಪಡೆಯುತ್ತಿದೆ. ಸಮಾಜದ ಮೇಲೆ ಅಭಿಮಾನ ಇನ್ನಷ್ಟು ಹೆಚ್ಚಿ ಸಂಘಟನೆ ಬಲಿಷ್ಟಗೊಂಡು ಇತರ ತಾಲೂಕುಗಳಿಗೂ ಆದರ್ಶವಾಗಬೇಕು ಎಂದರು.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಅಂತಿಮ ಪರೀಕ್ಷೆಗಳಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಪ್ರ ಕಪ್ ಕ್ರೀಡಾಕೂಟದ ತ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದ ತುಳು ಶಿವಳ್ಳಿ ಮಹಿಳಾ ತಂಡ ಹಾಗೂ ಕ್ರಿಕೆಟ್ನಲ್ಲಿ ದ್ವಿತೀಯ ಸ್ಥಾನ ಪಡೆದ ರವಿ ಚಕ್ಕಿತ್ತಾಯ ನೇತೃತ್ವದ ಶಿವಳ್ಳಿ ಉಜಿರೆ ವಲಯವನ್ನು ಗೌರವಾಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು.
Related Articles
Advertisement