Advertisement

ತುಳುಭಾಷೆ, ರಂಗಭೂಮಿಗೆ ಕಾಪಿಕಾಡ್‌ ಕೊಡುಗೆ ಅಪಾರ 

08:25 AM Aug 14, 2017 | Team Udayavani |

ಮಂಗಳೂರು: ಬೊಳ್ಳಿ ಮೂವೀಸ್‌ ಲಾಂಛನದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ನಿರ್ದೇಶನದಲ್ಲಿ ಶರ್ಮಿಳಾ ಡಿ. ಕಾಪಿಕಾಡ್‌, ಮುಖೇಶ್‌ ಹೆಗ್ಡೆ, ದಿನೇಶ್‌ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗಿರುವ “ಅರೆಮರೆಲರ್‌’ ತುಳು ಹಾಸ್ಯ ಸಿನೆಮಾ ಮಂಗಳೂರು ಸೇರಿದಂತೆ ಕರಾವಳಿಯ 13 ಸಿನೆಮಾ ಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.

Advertisement

ಮಂಗಳೂರಿನ ಪ್ರಭಾತ್‌, ಸಿನೆ ಪೊಲಿಸ್‌, ಬಿಗ್‌ ಸಿನೆಮಾಸ್‌, ಪಿವಿಆರ್‌,  ಉಡುಪಿಯಲ್ಲಿ ಕಲ್ಪನಾ, ಮೂಡಬಿದಿರೆ ಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್‌, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‌ನಲ್ಲಿ ನಟರಾಜ್‌, ಬೆಳ್ತಂಗಡಿಯಲ್ಲಿ ಭಾರತ್‌, ಸುಳ್ಯದಲ್ಲಿ ಸಂತೋಷ್‌, ಹಾಗೂ ಮಣಿಪಾಲದಲ್ಲಿ ಐನಾಕ್ಸ್‌ ಚಿತ್ರಮಂದಿರದಲ್ಲಿ “ಅರೆ ಮರ್ಲೆರ್‌’ ಬಿಡುಗಡೆಗೊಂಡಿದ್ದು, ಹೌಸ್‌ಫುಲ್‌ ಪ್ರದರ್ಶನ ಕಂಡಿತು.

ಮಂಗಳೂರಿನ ಪ್ರಭಾತ್‌ ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆ ಕಾರ್ಯ ಕ್ರಮವನ್ನು ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್‌. ಗಣೇಶ್‌ ರಾವ್‌ ಉದ್ಘಾಟಿಸಿ ಮಾತನಾಡಿದರು. ತುಳು ಭಾಷೆ, ತುಳು ರಂಗಭೂಮಿಗೆ ದೇವದಾಸ್‌ ಕಾಪಿಕಾಡ್‌ ಅವರ ಕೊಡುಗೆ ಅಪಾರ ವಾದುದು ಎಂದು ಶ್ಲಾ ಸಿದರು.

ಫಾದರ್‌ ಡೆನ್ನಿಸ್‌ ಅವರು ಮಾತ ನಾಡಿ, ತುಳು ಭಾಷೆಯ ಬೆಳವಣಿಗೆ ಯಲ್ಲಿ ದೇವದಾಸ್‌ ಕಾಪಿಕಾಡ್‌ ತನ್ನ ಯಶಸ್ವಿ ನಾಟಕಗಳ ಮೂಲಕ ಸಮಾಜದಲ್ಲಿ ಪರಿವರ್ತನೆಯ ಕೆಲಸ ಮಾಡಿದ್ದಾರೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದ ಸೇರ್ಪಡೆಗೆ ಎಲ್ಲರೂ ಒತ್ತಾಯಿಸುವ ಕೆಲಸ ಮಾಡಬೇಕು ಎಂದರು. 

ಉದ್ಯಮಿ ಸಚ್ಚಿದಾನಂದ ಶೆಟ್ಟಿ, ದಯಾ ಕಿರೋಡಿಯನ್‌ ದುಬಾೖ, ಪ್ರದೀಪ್‌ ಕಿರೋಡಿಯನ್‌ ದುಬಾೖ, ನಿವೃತ್ತ ಪೊಲೀಸ್‌ ಅಧಿಕಾರಿ ಜಯಂತ್‌ ಶೆಟ್ಟಿ, ನಿರ್ಮಾಪಕರಾದ ಕಿಶೋರ್‌ ಡಿ. ಶೆಟ್ಟಿ, ಪ್ರಕಾಶ್‌ ಪಾಂಡೇಶ್ವರ್‌, ಯೊಗೀತಾ ಬಂಗೇರ, ಸ್ವಪ್ನಾ ಕಿಣಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, “ಅರೆಮರೆಲರ್‌’ ಸಿನೆಮಾದ ನಾಯಕ ನಟ ಅರ್ಜುನ್‌ ಕಾಪಿಕಾಡ್‌ ನಾಯಕಿ ನಿಶ್ಮಿತಾ ಬಂಗೇರ, ಕಾವ್ಯಾ ಬಂಗೇರ, ನಿರ್ಮಾಪಕರಾದ ಶರ್ಮಿಳಾ ಡಿ. ಕಾಪಿಕಾಡ್‌ ಮುಖೇಶ್‌ ಹೆಗ್ಡೆ, ದಿನೇಶ್‌ ಶೆಟ್ಟಿ, ದೇವದಾಸ್‌ ಕಾಪಿಕಾಡ್‌, ಭೋಜರಾಜ ವಾಮಂಜೂರು, ಸಾಯಿಕೃಷ್ಣ, ಲಕ್ಷ್ಮಣ ಕುಮಾರ್‌ ಮಲ್ಲೂರು, ಗೋಪಿನಾಥ ಭಟ್‌, ಸುನೀಲ್‌ ನೆಲ್ಲಿಗುಡ್ಡ, ಅರ್ಜುನ್‌ ಕಜೆ, ರಾಜೇಶ್‌ ಕುಡ್ಲ, ಆಶಿಶ್‌ ವಾಮನ್‌ ಉಬಾರ್‌ ಮುಂತಾದವರು ಉಪಸ್ಥಿತರಿದ್ದರು. ಅನುರಾಗ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next